ಉತ್ತರಾಖಂಡ: ಉತ್ತರಾಖಂಡದ ಹರಿಪುರ ಪ್ರದೇಶದಲ್ಲಿ ಪ್ರವಾಹದಂತೆ ಭೋರ್ಗರೆದು ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಗೋಕಂದವನ್ನು (ಕರು) ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು ಸುರಕ್ಷಿತವಾಗಿ ರಕ್ಷಿಸಿದ ವಿಡಿಯೋ ಹಾಗೂ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಹರಿಪುರ ಭಾಗದಲ್ಲಿ ನದಿಯ ದಂಡೆಯಲ್ಲಿ ಮೇಯುತ್ತಿದ್ದ ಸಣ್ಣ ಕರು ನದಿಯ ರಭಸದ ಪ್ರವಾಹದಲ್ಲಿ ಕಾಲಿನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದು ಕೊಚ್ಚಿ ಹೋಗಲು ಆರಂಭಿಸಿತು. ಕರು ನೀರಿನಲ್ಲಿ ತೇಲಿ ಹೋಗುತ್ತಿದ್ದುದನ್ನು ಗಮನಿಸಿದ ಸ್ಥಳೀಯ ಯುವಕ ತಡಮಾಡದೆ ನದಿಯ ಭೋರ್ಗರೆಯುವ ಪ್ರವಾಹದ ನಡುವೆಯೂ ನೀರಿಗೆ ಧುಮುಕಿದ್ದಾನೆ.
ಇದನ್ನೂ ಓದಿ: ಆಕಾಶದಲ್ಲೇ ದಿಢೀರ್ ಕೆಳಕ್ಕೆ ಜಾರಿದ ಏರ್ ಇಂಡಿಯಾ ವಿಮಾನ: 17 ಪ್ರಯಾಣಿಕರಿಗೆ ಗಾಯ, DGCA ತನಿಖೆಗೆ ಆದೇಶ
ಇಲ್ಲಿದೆ ನೋಡಿ ವಿಡಿಯೋ:
ನೀರಿನ ಭಾರಿ ವೇಗ ಹಾಗೂ ಅಪಾಯಕಾರಿ ಹರಿವಿನ ನಡುವೆಯೂ ಈಜಿ ಸಾಗಿದ ಯುವಕ, ಕೊನೆಗೂ ಕರವನ್ನು ತಲುಪಿ ಅದನ್ನು ರಕ್ಷಿಸಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾನೆ. ಯುವಕನ ಈ ಸಾಹಸ ಹಾಗೂ ಪ್ರಾಣಿ ದಯೆಯನ್ನು ಕಂಡು ಸ್ಥಳೀಯರು ಮತ್ತು ನೆಟ್ಟಿಗರು ‘ರಿಯಲ್ ಹೀರೋ’ ಎಂದು ಶ್ಲಾಘಿಸುತ್ತಿದ್ದಾರೆ.

