ವಿಜಯನಗರ: ಹರಪನಹಳ್ಳಿಯ ದೊಡ್ಡ ಮೈಲಾರದಲ್ಲಿ ಗೊರವಯ್ಯನ ಕಾರ್ಣಿಕ ನುಡಿ ಹೊರಬಿದ್ದಿದೆ. ” ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ ” ಎಂದು ಗೊರವಯ್ಯ ನುಡಿದಿದ್ದಾರೆ.
ಭರತ ಹುಣ್ಣಿಮೆ ಹಿನ್ನೆಲೆ ಪ್ರತಿ ವರ್ಷದಂತೆ ಈ ಬಾರಿಯೂ ಹರಪನಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ನಡೆದಿದೆ. ಈ ವರ್ಷದ ಕಾರ್ಣಿಕವನ್ನು ಗೊರವಪ್ಪನವರು ಬಿಲ್ಲನ್ನೇರಿ ನಿಂತು, ಶೂನ್ಯವನ್ನು ದಿಟ್ಟಿಸುತ್ತಾ ನುಡಿ ಭಕ್ತರ ಜಯಘೋಷಗಳ ನಡುವೆ ಸದ್ದಲೇ ಪರಾಕ್ ಎಂದು ಹೇಳುವ ಮೂಲಕ ನುಡಿದರು.

ಇದನ್ನೂ ಓದಿ: ಟೆನ್ನಿಸ್ ದಿಗ್ಗಜ ಜೊಕೊವಿಕ್ ರನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ ಅಲ್ಕರಾಜ್
ಗೊರವಯ್ಯ ಸದ್ದಲೇ ಪರಾಕ್ ಎಂದ ಕೂಡಲೇ ನೆರದಿದ್ದ ಸಾವಿರಾರು ಸಂಖ್ಯೆ ಭಕ್ತ ಸಮೂಹವು ಒಂದು ಕ್ಷಣ ನಿಶ್ಯಬ್ಧವಾಯಿತು. ಆ ಬಳಿಕ ಗೊರವಯ್ಯನವರು ದೇವವಾಣಿಯಾದ ಕಾರ್ಣಿಕವನ್ನು ನುಡಿದರು. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದ ಭಾಗವಾಗಿದೆ. ಇಲ್ಲಿ ಕಾರ್ಣಿಕ ಹೇಳಿದ ನಂತರ, ಮೈಲಾರದಲ್ಲಿ ಮತ್ತೊಂದು ಕಾರ್ಣಿಕ ನಡೆಯುತ್ತದೆ.
ಹರಪನಹಳ್ಳಿಯ ಕಾರ್ಣಿಕವನ್ನು ಸಾವಿರಾರು ಭಕ್ತರು ಬಹಳ ನಂಬುತ್ತಾರೆ. ಈ ಬಾರಿ ಹೇಳಲಾದ “ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್” ಎಂಬ ನುಡಿ, ರಾಜ್ಯದಲ್ಲಿ ಸಮೃದ್ಧಿ ಮತ್ತು ಸಂತೋಷ ಇರಲಿದೆ ಎಂಬುದರ ಸೂಚನೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ” ರಾಜ್ಯದ ಜನತೆ ಸುಖದಿಂದ ಇರುತ್ತಾರೆ, ಮಳೆಬೆಳೆ ಚೆನ್ನಾಗಿ ಆಗುತ್ತದೆ” ಎಂದು ಹೇಳಲಾಗಿದೆ. ಈ ಮೂಲಕ ಭಕ್ತರದಲ್ಲಿ ಈ ವರ್ಷ ಆಶಾದಾಯಕವಾಗಿರಲಿದೆ ಎಂಬ ನಂಬಿಕೆ ಬಂದಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

