ಮುಂಬೈ: ‘ಬಿಗ್ ಬಾಸ್-9’ ಖ್ಯಾತಿಯ ಇರಾನ್ ಮೂಲದ ನಟಿ ಮಂದಾನ ಕರಿಮಿ ಅವರು ಭಾರತವನ್ನು ತೊರೆದು ಇರಾನ್ಗೆ ಮರಳುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಭಾರತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಭಾರತ ನನಗೆ ಒಂದು ರೀತಿಯಲ್ಲಿ ದ್ರೋಹ ಮಾಡಿದೆ” ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇರಾನ್ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆ ಮತ್ತು ಅಲ್ಲಿನ ಆಡಳಿತದ ವಿರುದ್ಧ ಮಂದಾನ ಭಾರತದಲ್ಲಿ ಧ್ವನಿ ಎತ್ತಿದ್ದರು. ಆದರೆ, ಭಾರತದಲ್ಲಿ ತಮಗೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಮತ್ತು ತಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ಭಾವುಕರಾಗಿದ್ದಾರೆ. ಇರಾನ್ ಪರವಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕೆ ಮುಂಬೈನಲ್ಲಿದ್ದ ತಮ್ಮ ಅನೇಕ ಸ್ನೇಹಿತರು ತಮಗೆ ಬೆನ್ನು ಹಾಕಿದ್ದಾರೆ. ಇದರಿಂದ ತಾವು ಕಳೆದ ಎರಡು ತಿಂಗಳಿಂದ ತೀವ್ರ ಒಂಟಿತನ ಮತ್ತು ಮನೆಗೋಗುವ ಹಂಬಲ (Homesick) ಅನುಭವಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು: ಹಿಂದೂ ವಿದ್ಯಾರ್ಥಿನಿಯರಿಗಾಗಿ ‘ದಿ ಕೇರಳ ಸ್ಟೋರಿ-2’ ಉಚಿತ ಪ್ರದರ್ಶನ; ನಾಳೆ ಜಿಎಲ್ ಒನ್ ಮಾಲ್ನಲ್ಲಿ ಸ್ಕ್ರೀನಿಂಗ್!
ಇರಾನ್ನ ಪ್ರಸ್ತುತ ಆಡಳಿತ ವ್ಯವಸ್ಥೆ ಬದಲಾದ ತಕ್ಷಣ ತಾವು ಅಲ್ಲಿಗೆ ಮರಳುವುದಾಗಿ ಮಂದಾನ ಹೇಳಿದ್ದಾರೆ. “ನನ್ನ ಬ್ಯಾಗ್ ಈಗಾಗಲೇ ಪ್ಯಾಕ್ ಆಗಿದೆ, ನಾನು ಭಾರತದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ” ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ಅಸಮಾಧಾನದ ನಡುವೆಯೂ, ಭಾರತ ತಮಗೆ ಮಾಡೆಲಿಂಗ್ ಮತ್ತು ನಟನಾ ವೃತ್ತಿಜೀವನವನ್ನು ನೀಡಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ತಮಗೆ ಬೆಂಬಲ ಸಿಗುತ್ತಿಲ್ಲ ಎಂಬುದು ಅವರ ಪ್ರಮುಖ ದೂರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

