ದೆಹಲಿ: ರಾಜ್ಯಸಭೆಯ 68 ಸದಸ್ಯರ ನಿವೃತ್ತಿಯ ಹಿನ್ನೆಲೆಯಲ್ಲಿ ಇಂದು ಸದನದಲ್ಲಿ ವಿಶೇಷ ವಿದಾಯ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಿವೃತ್ತ ಸದಸ್ಯರು ದೇಶದ ನೀತಿ ನಿರೂಪಣೆಯಲ್ಲಿ ವಹಿಸಿದ ಪಾತ್ರ ಮತ್ತು ಅವರ ಸುದೀರ್ಘ ಅನುಭವವನ್ನು ಶ್ಲಾಘಿಸಿದರು. “ಜ್ಞಾನವು ಪುಸ್ತಕಗಳಿಂದ ಸಿಗಬಹುದು, ಆದರೆ ಅನುಭವವು ಜೀವನದ ಪಾಠಗಳಿಂದ ಬರುತ್ತದೆ. ನಿವೃತ್ತರಾಗುತ್ತಿರುವ ಸದಸ್ಯರ ದಶಕಗಳ ಅನುಭವವು ಕೇವಲ ವ್ಯಕ್ತಿಗೆ ಸೀಮಿತವಲ್ಲ, ಅದು ಇಡೀ ದೇಶದ ಆಸ್ತಿ” ಎಂದು ಪ್ರಧಾನಿ ಹೇಳಿದರು.
ನಿವೃತ್ತ ಸದಸ್ಯರು ಸದನದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ಇಲ್ಲಿನ ಚರ್ಚೆಗಳು ದೇಶದ ಭವಿಷ್ಯದ ಮೇಲೆ ಗಾಢ ಪ್ರಭಾವ ಬೀರಲಿವೆ ಎಂದರು.ಸದನದಿಂದ ನಿವೃತ್ತರಾದರೂ ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಡಿ. ನಿಮ್ಮ ಅನುಭವವನ್ನು ಸಮಾಜದ ಏಳಿಗೆಗಾಗಿ ಬಳಸಿಕೊಳ್ಳಿ ಎಂದು ಸದಸ್ಯರಿಗೆ ಕರೆ ನೀಡಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ: “ಟ್ರಂಪ್ ಸರ್ವಾಧಿಕಾರಿ, ಮೋದಿ ಅವರ ಗುಲಾಮ”
ವಿವಿಧ ರಾಜಕೀಯ ಸಿದ್ಧಾಂತಗಳ ನಡುವೆಯೂ ರಾಷ್ಟ್ರದ ಹಿತಾಸಕ್ತಿ ಬಂದಾಗ ಸದಸ್ಯರು ತೋರಿದ ಒಗ್ಗಟ್ಟನ್ನು ಪ್ರಧಾನಿ ಈ ಸಂದರ್ಭದಲ್ಲಿ ನೆನೆದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

