Breaking News

ಅಕ್ರಮ ಧಾರ್ಮಿಕ ಕೇಂದ್ರಗಳ ಸಕ್ರಮ, ಇದು ಕಾಂಗ್ರೆಸ್ ಪಕ್ಷದ ಹಿಂದುತ್ವ: ಅಶೋಕ್ ರೈ

Puttur MLA Ashok Rai inaugurated the Gupura of the Poonjiroti Shri Brahma Baidarkala Garadi Ankathadka

ಪುತ್ತೂರು: ಕೆಯ್ಯೂರು ಗ್ರಾಮದ ಅಂಕತ್ತಡ್ಕ ಪೂಂಜಿರೋಟಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಸುತ್ತು ಗೋಪುರವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, ಸರಕಾರಿ ಜಾಗದಲ್ಲಿ ನಿರ್ಮಾಣವಾಗಿರುವ ಎಲ್ಲಾ ಧರ್ಮಿಯರ ಮಂದಿರಗಳನ್ನು ಸಕ್ರಮ ಗೊಳಿಸುವಲ್ಲಿ ಹೊಸ ಕಾನೂನು ಮಾಡಿ ಆ ಮೂಲಕ ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳ ಸಕ್ರಮ ನಡೆಯಲಿದೆ ಇದು ಕಾಂಗ್ರೆಸ್ ಹಿಂದುತ್ವವಾಗಿದೆ ಎಂದು ಹೇಳಿದರು.

ಹಿಂದುತ್ವ ದ ಹೆಸರಿನಲ್ಲಿ ಮತ ಕೇಳಿ ಅಧಿಕಾರ ಪಡೆದವರು ಈ ಕೆಲಸವನ್ನು ಮಾಡಿಲ್ಲ‌ . ಧರ್ಮ, ದೇವರ ಹೆಸರಲ್ಲಿ ಎಂದೂ ರಾಜಕೀಯ ಮಾಡದ ಕಾಂಗ್ರೆಸ್ ಸರಕಾರ ಇದೀಗ ಹಿಂದುತ್ವಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಜನರು ನಕಲಿ ಯಾವುದು ಒರಿಜಿನಲ್ ಯಾವುದು ಎಂಬುದನ್ನು ಇನ್ನಾದರೂ ಅರಿತುಕೊಳ್ಳಲಿ ಎಂದು ಹೇಳಿದರು.

Advertisement

ಇದನ್ನೂ ಓದಿ: ಪುತ್ತೂರು: ಬಿಲ್ಡ್ ಟೆಕ್ ಎಕ್ಸ್‌ಪೋ ಉದ್ಘಾಟನೆ; ಆಧುನಿಕ ತಂತ್ರಜ್ಞಾನ ಬಳಕೆಗೆ ಶಾಸಕ ಅಶೋಕ್ ಕುಮಾರ್ ರೈ ಕರೆ

ಕೆಯ್ಯೂರು ದೇವಸ್ಥಾನದ ಅಧ್ಯಕ್ಷ ಎ.ಕೆ.ಜಯರಾಂ ರೈ, ಹಿರಿಯರಾದ ಸಂತೋಷ್ ರೈ ಇಳಂತಾಜೆ , ಬ್ಲಾಕ್ ಅಧ್ಯಕ್ಷ ಕೆ.ಪಿ. ಆಳ್ವ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಅಂಕತಡ್ಕ ಬ್ರಹ್ಮ ಬೈದರ್ಕಳ ನೇತ್ರಾವತಿ ಗರಡಿ ಇದರ ಅಧ್ಯಕ್ಷ ಕೆ‌ಎಸ್ ಪದ್ಮನಾಭ ಭಂಡಾರಿ ಸೇರಿದಂತೆ ಗರಡಿಯ ಪ್ರಮುಖರು ಉಪಸ್ಥಿತರಿದ್ದರು. ಜಯಂತಪೂಜಾರಿ ಕೆಂಗುಡೇಲು ಸ್ವಾಗತಿಸಿ, ಪೂರ್ಣೇಶ್‌ಭಂಡಾರಿ ವಂದಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು