ರಷ್ಯಾದಿಂದ ಚೀನಾಕ್ಕೆ ಹೋಗುತ್ತಿದ್ದ ಕಚ್ಚ ತೈಲಾ ಹೊತ್ತ ಹಡಗು ಭಾರತಕ್ಕೆ ಯೂಟರ್ನ್

russian oil tankers india mangaluru port news

ನವದೆಹಲಿ: ಜಾಗತಿಕ ಇಂಧನ ಸರಬರಾಜು ಸರಪಳಿಯಲ್ಲಿ ಉಂಟಾಗಿರುವ ಅಡಚಣೆಗಳ ನಡುವೆಯೇ ರಷ್ಯಾದಿಂದ ಚೀನಾಕ್ಕೆ ಹೋಗುತ್ತಿದ್ದ ಕಚ್ಚಾ ತೈಲ ಹೊತ್ತ ಹಡಗು ಭಾರತಕ್ಕೆ ಯೂಟರ್ನ್‌ ಹೊಡೆದಿದೆ. ಹೌದು, ದೇಶದಲ್ಲಿ ತೈಲ ಕೊರತೆ ಉಂಟಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರಷ್ಯಾ ಹಾಗೂ ಚೀನಾದ ಜೊತೆ ಮಾತುಕತೆ ನಡೆಸಿ ರಷ್ಯಾದಿಂದ ಚೀನಾಕ್ಕೆ ಸಾಗಿಸುತ್ತಿದ್ದ ಕಚ್ಚಾ ತೈಲವನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವಲ್ಲಿ ಭಾರತದ ವಿದೇಶಾಂಗ ಇಲಾಖೆಯು ಯಶಸ್ವಿಯಾಗಿದೆ.

ರಷ್ಯನ್ ಕಚ್ಚಾ ತೈಲವನ್ನು ಹೊತ್ತ ಒಂದು ಟ್ಯಾಂಕರ್ ಮಾರ್ಚ್ 21ರಂದು ನ್ಯೂ ಮಂಗಳೂರು ಬಂದರಿಗೆ ತಲುಪಲಿದ್ದು, ಮೂಲತಃ ಚೀನಾಕ್ಕೆ ತೆರಳಬೇಕಿದ್ದ ಕನಿಷ್ಠ ಏಳು ಹಡಗುಗಳು ಇದೀಗ ಭಾರತದತ್ತ ಮುಖ ಮಾಡಿವೆ.

Advertisement

ವೊರ್ಟೆಕ್ಸಾ ಲಿಮಿಟೆಡ್ ಮಾಹಿತಿ ಪ್ರಕಾರ, ಅಮೆರಿಕಾದಿಂದ ಭಾರತಕ್ಕೆ ‘ನಿಷೇಧಿತ’ ರಷ್ಯನ್ ತೈಲ ಖರೀದಿಗೆ ತಾತ್ಕಾಲಿಕ ವಿನಾಯಿತಿ ಸಿಕ್ಕ ಹಿನ್ನೆಲೆ ಈ ಬದಲಾವಣೆ ಸಂಭವಿಸಿದೆ. ಇರಾನ್ ಯುದ್ಧದಿಂದ ಹೊರ್ಮುಜ್ ಜಲಸಂಧಿ ಭಾಗಶಃ ಮುಚ್ಚಲ್ಪಟ್ಟಿದ್ದು, ಜಾಗತಿಕ ತೈಲ ಸರಬರಾಜಿನ ಮೇಲೆ ಭಾರಿ ಪರಿಣಾಮ ಬೀರಿದೆ.

‘ಅಕ್ವಾ ಟೈಟನ್’ ಎಂಬ ಟ್ಯಾಂಕರ್ ಬಾಲ್ಟಿಕ್ ಸಮುದ್ರದಿಂದ ಜನವರಿಯಲ್ಲಿ ಹೊರಟು ಚೀನಾಕ್ಕೆ ಹೋಗಬೇಕಿತ್ತು. ಆದರೆ ಭಾರತಕ್ಕೆ ವಿನಾಯಿತಿ ಸಿಕ್ಕ ಬಳಿಕ ಮಧ್ಯ ಮಾರ್ಚ್‌ನಲ್ಲಿ ದಿಕ್ಕು ಬದಲಿಸಿ ಇದೀಗ ಭಾರತತ್ತ ಬರುತ್ತಿದೆ. ‘ಜೌಝೌ ಎನ್’ ಎಂಬ ಮತ್ತೊಂದು ಟ್ಯಾಂಕರ್ ಜಾಮ್‌ ನಗರದ ಸಿಕ್ಕಾ ಬಂದರಿಗೆ ಮಾರ್ಚ್ 25ರಂದು ತಲುಪುವ ನಿರೀಕ್ಷೆಯಿದೆ.

ಅಮೆರಿಕಾದ 30 ದಿನಗಳ ವಿನಾಯಿತಿ ನಂತರ ಭಾರತೀಯ ರಿಫೈನರಿಗಳು ರಷ್ಯನ್ ತೈಲ ಖರೀದಿಯನ್ನು ಹೆಚ್ಚಿಸಿವೆ. ಒಂದೇ ವಾರದಲ್ಲಿ ಭಾರತವು ಸುಮಾರು 30 ಮಿಲಿಯನ್ ಬ್ಯಾರೆಲ್ ತೈಲವನ್ನು ಖರೀದಿಸಿದೆ. ಜನವರಿಯಲ್ಲಿ ಭಾರತದ ಒಟ್ಟು ಆಮದುಗಳಲ್ಲಿ ರಷ್ಯನ್ ತೈಲದ ಪಾಲು ಸುಮಾರು 21% ಇತ್ತು.

ಇದನ್ನೂ ಓದಿ: ಟೋಲ್ ಕಳ್ಳಾಟಕ್ಕೆ ಬೀಳಲಿದೆ ಬ್ರೇಕ್: ಇನ್ಮುಂದೆ ಟೋಲ್ ಪಾವತಿಸದೆ ಹೋದ್ರೆ ಬೀಳುತ್ತೆ ಡಬಲ್ ದಂಡ!

ಇದಕ್ಕೂ ಮೊದಲು ಭಾರತ ಖರೀದಿಯನ್ನು ಕಡಿಮೆ ಮಾಡಿದಾಗ ಚೀನಾ ರಿಯಾಯಿತಿ ದರದ ರಷ್ಯನ್ ತೈಲವನ್ನು ಹೆಚ್ಚು ಪ್ರಮಾಣದಲ್ಲಿ ಆಮದು ಮಾಡಿಕೊಂಡಿತು. ಈಗ ಅಮೆರಿಕಾ ನಿಯಮ ಸಡಿಲಿಕೆ ನೀಡಿದ ಹಿನ್ನೆಲೆಯಲ್ಲಿ ಮತ್ತೆ ಸ್ಪರ್ಧೆ ಹೆಚ್ಚಾಗಿದೆ.

ಭಾರತದ ಇಂಧನ ಅಗತ್ಯಗಳಲ್ಲಿ ಸುಮಾರು 90% ಆಮದುಗಳೇ ಅವಲಂಬಿತವಾಗಿದ್ದು, ಹೊರ್ಮುಜ್ ಜಲಸಂಧಿ ಅತ್ಯಂತ ಮಹತ್ವದ್ದಾಗಿದೆ. ಭಾರತದ 40–50% ಕಚ್ಚಾ ತೈಲ, ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ಸರಬರಾಜು ಈ ಮಾರ್ಗದಿಂದಲೇ ಸಾಗುತ್ತದೆ.

ಇರಾನ್ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ದೇಶದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿ ಮುಂಬೈ ಮತ್ತು ಬೆಂಗಳೂರಿನ ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಿರುವ ವರದಿಗಳೂ ಬಂದಿವೆ.

ಈ ನಡುವೆ, ಮೂರು ಭಾರತೀಯ ಹಡಗುಗಳು ಯಶಸ್ವಿಯಾಗಿ ಹೊರ್ಮುಜ್ ಜಲಸಂಧಿ ದಾಟಿ ಬಂದಿದ್ದು, ಇನ್ನೂ ಸುಮಾರು 20 ಹಡಗುಗಳು ಅನುಮತಿಗಾಗಿ ಕಾಯುತ್ತಿವೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತಕ್ಕೆ ಇರಾನ್ ಜೊತೆ ಸಾಮಾನ್ಯ ಒಪ್ಪಂದ ಇಲ್ಲ ಎಂದು ಹೇಳಿದ್ದಾರೆ.

ಈ ಪರಿಸ್ಥಿತಿಯಲ್ಲಿ ರಷ್ಯನ್ ತೈಲ ಹೊತ್ತ ಹಡಗುಗಳ ಆಗಮನ ಭಾರತಕ್ಕೆ ತಾತ್ಕಾಲಿಕ ಇಂಧನ ಸಂಕಷ್ಟದಿಂದ ಪರಿಹಾರ ನೀಡುವ ನಿರೀಕ್ಷೆಯಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು