ಬೆಂಗಳೂರು: ಇಂದು ಶನಿವಾರ, ಶ್ರೀ ಶನಿ ಮಹಾತ್ಮನ ಆರಾಧನೆಯ ದಿನ. ಗ್ರಹಗತಿಗಳ ಬದಲಾವಣೆಯು ಇಂದು ಕೆಲವು ರಾಶಿಗಳಿಗೆ ಅದೃಷ್ಟ ತರಲಿದ್ದರೆ, ಇನ್ನು ಕೆಲವರಿಗೆ ಸವಾಲುಗಳನ್ನು ಒಡ್ಡಲಿದೆ. ನಿಮ್ಮ ರಾಶಿಯ ಫಲ ಹೇಗಿದೆ ನೋಡಿ
ಮೇಷ: ಇಂದು ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಆರೋಗ್ಯದ ಕಡೆ ಗಮನವಿರಲಿ.

ವೃಷಭ: ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಳೆಯ ಬಾಕಿ ವಸೂಲಿಯಾಗುವ ಸಾಧ್ಯತೆ ಇದೆ.
ಮಿಥುನ: ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಪ್ರಯಾಣದ ವೇಳೆ ಜಾಗರೂಕರಾಗಿರಿ.
ಕರ್ಕಾಟಕ: ಹೂಡಿಕೆಯಿಂದ ಲಾಭವಾಗಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು.
ಸಿಂಹ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕಚೇರಿಯಲ್ಲಿ ಮೇಲಧಿಕಾರಿಗಳ ಪ್ರಶಂಸೆ ಸಿಗಲಿದೆ.
ಕನ್ಯಾ: ವ್ಯಾಪಾರದಲ್ಲಿ ಅಲ್ಪ ಹಿನ್ನಡೆಯಾಗಬಹುದು. ತಾಳ್ಮೆಯಿಂದ ಕೆಲಸ ನಿರ್ವಹಿಸಿ.
ತುಲಾ: ಸಾಲದ ಬಾಧೆಯಿಂದ ಮುಕ್ತಿ ಸಿಗುವ ಕಾಲ ಹತ್ತಿರದಲ್ಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.
ವೃಶ್ಚಿಕ: ಭೂಮಿ ಅಥವಾ ವಾಹನ ಖರೀದಿ ಯೋಗವಿದೆ. ಮಕ್ಕಳ ಶಿಕ್ಷಣದ ಬಗ್ಗೆ ಶುಭವಾರ್ತೆ ಕೇಳುವಿರಿ.
ಧನು: ಹಠಾತ್ ಧನಲಾಭವಾಗುವ ಸಾಧ್ಯತೆ ಇದೆ. ಸ್ನೇಹಿತರಿಂದ ಸಹಾಯ ದೊರೆಯಲಿದೆ.
ಮಕರ: ಕೆಲಸದ ಒತ್ತಡ ಹೆಚ್ಚಾಗಬಹುದು. ವಿಶ್ರಾಂತಿಗೆ ಸಮಯ ಮೀಸಲಿಡಿ. ಶನಿ ದೇವನ ಪ್ರಾರ್ಥನೆ ಶುಭ.
ಕುಂಭ: ಹೊಸ ಉದ್ಯೋಗದ ಆಫರ್ ಬರುವ ಸಾಧ್ಯತೆ ಇದೆ. ಮನೆ ನಿರ್ಮಾಣದ ಕಾರ್ಯ ಚುರುಕುಗೊಳ್ಳಲಿದೆ.
ಮೀನ: ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಸಿಗಲಿದೆ. ಅನಾವಶ್ಯಕ ಖರ್ಚುಗಳಿಗೆ ಲಗಾಮು ಹಾಕಿ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

