ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಾಗೂ ನಗರಾಭಿವೃದ್ಧಿ ಸಚಿವರ ವಿರುದ್ಧ ವಿಪಕ್ಷ ಬಿಜೆಪಿ ಭಾರಿ ವಾಗ್ದಾಳಿ ನಡೆಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಆದೇಶ ಹಾಗೂ ಮಾತಿಗೆ ಶಿವಾಜಿನಗರ ಕ್ಷೇತ್ರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಶಾಸಕರೇ ಪ್ರತಿನಿಧಿಸುವ ಶಿವಾಜಿನಗರ ಕ್ಷೇತ್ರದಲ್ಲಿ ಎಂದಿನಂತೆಯೇ ಫುಟ್ಪಾತ್ಗಳ ಮೇಲೆ ಎಗ್ಗಿಲ್ಲದೆ ಬೀದಿ ವ್ಯಾಪಾರ ಮುಂದುವರಿದಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ನಗರದ ಮಲ್ಲೇಶ್ವರಂ ಸೇರಿದಂತೆ ಹಲವು ಭಾಗಗಳಲ್ಲಿ ಫುಟ್ಪಾತ್ ಆಕ್ರಮಣ ತೆರವುಗೊಳಿಸಲು ತೋರಿಸುವ ಆಸಕ್ತಿಯನ್ನು ಶಿವಾಜಿನಗರದಲ್ಲಿ ಏಕಾಗ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ದೆಹಲಿಯಲ್ಲಿ ದೌರ್ಜನ್ಯ, ಬೆಂಗಳೂರಿನಲ್ಲಿ ನಕಲಿ ನಾಟಕ: ಬಿಜೆಪಿ ವಿರುದ್ಧ ಬಿ. ಕೆ. ಹರಿಪ್ರಸಾದ್ ಆಕ್ರೋಶ
ಇಲ್ಲಿದೆ ನೊಡಿ ಎಕ್ಸ್ ಪೋಸ್ಟ್:
ಬೆಂಗಳೂರು ನಗರಾಭಿವೃದ್ಧಿ ಸಚಿವ @krishnabgowda ಅವರ ಮಾತಿಗೆ ಶಿವಾಜಿನಗರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ..!
ಕಾಂಗ್ರೆಸ್ ಶಾಸಕರೇ ಇರುವ ಶಿವಾಜಿನಗರದಲ್ಲಿ ಎಂದಿನಂತೆಯೇ ಫುಟ್ಬಾತ್ನಲ್ಲಿ ಎಗ್ಗಿಲ್ಲದೆ ಬೀದಿ ವ್ಯಾಪಾರ ಮುಂದುವರಿದಿದೆ.
ಸಚಿವ ಕೃಷ್ಣಬೈರೇಗೌಡ ಅವರೇ, ಮಲ್ಲೇಶ್ವರಂಗೊಂದು ಕಾನೂನು..! ಶಿವಾಜಿನಗರಕ್ಕೆ ಇನ್ನೊಂದು ಕಾನೂನಾ?… pic.twitter.com/cvbfv6zv5p
— BJP Karnataka (@BJP4Karnataka) July 23, 2026
ಸಚಿವ ಕೃಷ್ಣಬೈರೇಗೌಡ ಅವರನ್ನು ನೇರವಾಗಿ ಪ್ರಶ್ನಿಸಿರುವ ಬಿಜೆಪಿ, “ಸಚಿವ ಕೃಷ್ಣಬೈರೇಗೌಡ ಅವರೇ, ಮಲ್ಲೇಶ್ವರಕ್ಕೊಂದು ಕಾನೂನು, ಶಿವಾಜಿನಗರಕ್ಕೆ ಇನ್ನೊಂದು ಕಾನೂನಾ? ಶಿವಾಜಿನಗರದಲ್ಲಿ ಫುಟ್ಪಾತ್ ತೆರವುಗೊಳಿಸುವುದಕ್ಕೆ ನಿಮಗೆ ಧೈರ್ಯವಿಲ್ಲವೇ ಅಥವಾ ನಿಮ್ಮ ವೋಟ್ಬ್ಯಾಂಕ್ ರಾಜಕಾರಣದ ಭಯವೇ?” ಕ್ಷೇತ್ರದಿಂದ ಕ್ಷೇತ್ರಕ್ಕೆ ತಾರತಮ್ಯ ಎಸಗದೆ ನಗರದಾದ್ಯಂತ ಏಕರೂಪವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

