ಪುತ್ತೂರು: ವಿವೇಕಾನಂದ ಸಿಬಿಎಸ್ಇ ಶಾಲೆಯಲ್ಲಿ (ಆಗಸ್ಟ್ 13) ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಗಣಿತ ಮತ್ತು ವಿಜ್ಞಾನ ಮೇಳದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಸುಧನ್ವ ಕಾಮತ್ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ವಿಜ್ಞಾನ ಮೇಳದಲ್ಲಿ ‘ಸ್ವಚ್ಛ ಭಾರತ ಹಾಗೂ ತ್ಯಾಜ್ಯ ನಿರ್ವಹಣೆ’ (Swachh Bharat & Waste Management) ವಿಷಯಾಧಾರಿತವಾಗಿ ಸ್ವತಃ ತಯಾರಿಸಿದ್ದ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿದ ಸುಧನ್ವ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಸುಧನ್ವ ಕಾಮತ್ ಅವರು ಶೀಘ್ರದಲ್ಲೇ ಬಳ್ಳಾರಿಯಲ್ಲಿ ಜರುಗಲಿರುವ ರಾಜ್ಯಮಟ್ಟದ ಗಣಿತ-ವಿಜ್ಞಾನ ಮೇಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ;ಕೊಡಿಪ್ಪಾಡಿಯಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಸಂಪನ್ನ: ಅರುಣ್ ಕುಮಾರ್ ಪುತ್ತಿಲ ಅವರಿಗೆ ಸನ್ಮಾನ
ಸಾಧಕ ವಿದ್ಯಾರ್ಥಿ ಸುಧನ್ವ ಕಾಮತ್ ಅವರು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ನಿವಾಸಿಗಳಾದ ಪ್ರವೀಣ್ ಕಾಮತ್ ಹಾಗೂ ರಂಜನಿ ಕೆ. ದಂಪತಿಯ ಪುತ್ರ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

