ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರದಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ವೊಂದು ಮಂಗಳವಾರ ರಾತ್ರಿ ಹೊಸನಗರ ತಾಲ್ಲೂಕಿನ ಸುಧೂರು ಸಮೀಪ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಚಾಲಕ ಮತ್ತು ಕಂಡಕ್ಟರ್ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಶ್ರೀ ಅಣ್ಣಪೂರ್ಣೇಶ್ವರಿ ಟ್ರಾವೆಲ್ಸ್ಗೆ ಸೇರಿದ ನಾನ್-ಎಸಿ ಬಸ್ನಲ್ಲಿ ಒಟ್ಟು 36 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ರಾತ್ರಿ ಸುಮಾರು 10.30ರ ವೇಳೆಗೆ ಬಸ್ ಸುಧೂರಿನತ್ತ ಸಾಗುತ್ತಿದ್ದಾಗ ಚಾಲಕರ ಕೇಬಿನ್ನಿಂದ ಹೊಗೆ ಕಾಣಿಸಿಕೊಂಡಿದೆ. ಆತಂಕಗೊಂಡ ಚಾಲಕ ಬಸ್ ನಿಲ್ಲಿಸಲು ಯತ್ನಿಸಿದ ವೇಳೆ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

Private sleeper bus catches fire near Hosanagara in Karnataka
A private sleeper bus (non-AC), heading to Bengaluru from Hosanagara in Shivamogga district, caught fire near Sudur in Hosanagara taluk on Tuesday night (January 27, 2026), leaving several injured. As the bus carrying… pic.twitter.com/q6TTVxe4rr
— Karnataka Portfolio (@karnatakaportf) January 28, 2026
ಅಪಘಾತದ ಬಳಿಕ ಬೆಂಕಿ ತೀವ್ರಗೊಂಡಿದ್ದು, ಇನ್ನೂ ನಿದ್ರೆಗೆ ಜಾರಿರದಿದ್ದ ಪ್ರಯಾಣಿಕರು ತಕ್ಷಣ ಕಿಟಕಿಗಳು ಹಾಗೂ ತುರ್ತು ನಿರ್ಗಮನ ದ್ವಾರ ತೆರೆಯುವ ಮೂಲಕ ಬಸ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ : ಮಹಾರಾಷ್ಟ್ರ ದುರಂತ: ಬೆಂಕಿಯ ತೀವ್ರತೆಯಿಂದ ಒಳಗಿದ್ದವರನ್ನು ಹೊರಗೆಳಯಲಾಗಲಿಲ್ಲ: ಪ್ರತ್ಯಕ್ಷ ದರ್ಶಿ
ಈ ಕುರಿತು ಪ್ರತಿಕ್ರಿಯಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಇದು ನಾನ್-ಎಸಿ ಬಸ್ ಆಗಿದ್ದರಿಂದ ಪ್ರಯಾಣಿಕರು ಸುಲಭವಾಗಿ ಕಿಟಕಿಗಳ ಮೂಲಕ ಹೊರಬರಲು ಸಾಧ್ಯವಾಯಿತು. ಮೂರು ಮಂದಿಗೆ ಬೆಂಕಿ ಗಾಯಗಳಾಗಿದ್ದು, ಇನ್ನೂ ಕೆಲವರಿಗೆ ಆತುರದಲ್ಲಿ ಇಳಿಯುವಾಗ ಗಾಯಗಳಾಗಿವೆ, ಎಂದು ತಿಳಿಸಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅಪಘಾತಕ್ಕೆ ಕಾರಣವಾದ ನಿಖರ ವಿಚಾರಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

