Breaking News

Delhi : ‘ನಿನ್ನ ಸಹೋದರಿಯನ್ನು ಕೊಲ್ಲುತ್ತಿದ್ದೇನೆ’ : ಕಮಾಂಡೋ ಪತ್ನಿಯ ಕೊಲೆಗೈದ ಪತಿ!

ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನ ದಳದ (SWAT) 27 ವರ್ಷದ ಕಮಾಂಡೋ ಕಾಜಲ್ ಚೌಧರಿ ಅವರನ್ನು ಪತಿ ಅಂಕುರ್ ಅಮಾನವೀಯವಾಗಿ ಹಲ್ಲೆ ನಡೆಸಿ, ತಲೆಗೆ ಡಂಬೆಲ್‌ನಿಂದ ಹೊಡೆದು ಕೊಂದಿರುವ ಘಟನೆ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ.

ಹಲ್ಲೆ ನಡೆಸುವ ವೇಳೆ ‘ನಾನು ಅವಳನ್ನು ಕೊಲ್ಲುತ್ತಿದ್ದೇನೆ’ ಎಂದು ಅಂಕುರ್ ಕಾಜಲ್ ಸಹೋದರನಿಗೆ ಫೋನ್‌ನಲ್ಲಿ ಹೇಳಿರುವುದು ಪ್ರಕರಣವನ್ನು ಇನ್ನಷ್ಟು ಭೀಕರವಾಗಿಸಿದೆ. ಜನವರಿ 22ರ ರಾತ್ರಿ, ಕಾಜಲ್ ಸಹೋದರ ನಿಖಿಲ್‌ಗೆ ಅಂಕುರ್ ಕರೆ ಮಾಡಿ, “ನಿನ್ನ ತಂಗಿಯನ್ನು ಸಮಜಾಯಿಷಿ ಮಾಡು” ಎಂದು ಹೇಳಿದ್ದಾನೆ. ನಿಖಿಲ್ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ಸ್ಟೇಬಲ್.

Advertisement

“ಸಾಮಾನ್ಯವಾಗಿ ಅವಳು ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಆ ದಿನ ತನ್ನ ನೋವುಗಳನ್ನೆಲ್ಲಾ ಹೇಳುತ್ತಿದ್ದಳು. ನಾವು ಮಾತನಾಡುತ್ತಿದ್ದಾಗಲೇ ಅಂಕುರ್ ಕೋಪಗೊಂಡು ಅವಳ ಕೈಯಿಂದ ಫೋನ್ ಕಿತ್ತುಕೊಂಡ,” ಎಂದು ನಿಖಿಲ್ ಪಿಟಿಐಗೆ ತಿಳಿಸಿದ್ದಾರೆ.
ನಂತರ ಅಂಕುರ್, “ಈ ಕರೆ ರೆಕಾರ್ಡಿಂಗ್‌ನಲ್ಲಿ ಇಟ್ಟುಕೋ, ಪೊಲೀಸ್ ಸಾಕ್ಷಿಯಾಗಿ ಉಪಯೋಗವಾಗುತ್ತದೆ. ನಾನು ನಿನ್ನ ತಂಗಿಯನ್ನು ಕೊಲ್ಲುತ್ತಿದ್ದೇನೆ. ಪೊಲೀಸರು ನನ್ನನ್ನು ಏನೂ ಮಾಡಲಾರರು” ಎಂದು ಹೇಳಿದ್ದಾನೆ. ಬಳಿಕ ಕಾಜಲ್ ಕಿರುಚಿದ ಧ್ವನಿ ಕೇಳಿಸಿಕೊಂಡಿದ್ದು, ಕರೆ ಹಠಾತ್ ಮುಕ್ತಾಯಗೊಂಡಿದೆ ಎಂದು ನಿಖಿಲ್ ಕಣ್ಣೀರಿನಿಂದ ವಿವರಿಸಿದ್ದಾರೆ. ಐದು ನಿಮಿಷಗಳ ಬಳಿಕ ಮತ್ತೆ ಅಂಕುರ್ ಕರೆ ಮಾಡಿ, “ಅವಳು ಸತ್ತಿದ್ದಾಳೆ. ಆಸ್ಪತ್ರೆಗೆ ಬಾ” ಎಂದು ಹೇಳಿದ್ದಾನೆ. ಪೊಲೀಸರು ಮತ್ತು ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದಾಗ, ಅಂಕುರ್ ಮತ್ತು ಅವನ ಕುಟುಂಬದವರು ಈಗಾಗಲೇ ಅಲ್ಲಿ ಇದ್ದರು. “ನನ್ನ ತಂಗಿಯನ್ನು ಆ ಸ್ಥಿತಿಯಲ್ಲಿ ನೋಡಿದಾಗ… ಶತ್ರುವನ್ನೂ ಇಷ್ಟು ಕ್ರೂರವಾಗಿ ಯಾರೂ ಕೊಲ್ಲುವುದಿಲ್ಲ,” ಎಂದು ನಿಖಿಲ್ ನೋವಿನಿಂದ ಹೇಳಿದರು.

ಇದನ್ನೂ ಓದಿ : Delhi : ದೆಹಲಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅಪ್ರಾಪ್ತರಿಂದ ಗ್ಯಾಂಗ್ ರೇಪ್!

ವರದಕ್ಷಿಣೆ ಕಿರುಕುಳ ಆರೋಪ ;
ಕಾಜಲ್ ಅವರ ಪೋಷಕರ ಪ್ರಕಾರ, ಮದುವೆಯಾದ ಎರಡು ವರ್ಷಗಳ ಅವಧಿಯಲ್ಲಿ ಅಂಕುರ್ ತಾಯಿ ಹಾಗೂ ಇಬ್ಬರು ಸಹೋದರಿಯರಿಂದ ನಿರಂತರ ವರದಕ್ಷಿಣೆ ಕಿರುಕುಳ ಎದುರಿಸಬೇಕಾಯಿತು. 2023ರಲ್ಲಿ ಮದುವೆಯಾದ ಈ ದಂಪತಿಗಳ ನಡುವೆ ಹಣಕಾಸು ಹಾಗೂ ಮನೆ ವಿಚಾರವಾಗಿ ನಿರಂತರ ಜಗಳಗಳಾಗುತ್ತಿತ್ತು. ಕಾಜಲ್ ತಾಯಿ ಹೇಳುವಂತೆ, ಮಗಳೇ ತನ್ನ ಅತ್ತೆಮಾವಂದಿರಿಗಾಗಿ ಸಾಲ ತೆಗೆದುಕೊಂಡಿದ್ದಳು. ಅಂಕುರ್ ಕೂಡ ಕಾಜಲ್ ಪೋಷಕರಿಂದ ಹಣ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಕಾಜಲ್ ತಂದೆ ರಾಕೇಶ್, ಮದುವೆಯ ವೇಳೆ ಬುಲೆಟ್ ಬೈಕ್, ಚಿನ್ನಾಭರಣ ಮತ್ತು ನಗದು ನೀಡಿದರೂ, “ಬೇರೊಬ್ಬಳನ್ನು ಮದುವೆಯಾದರೆ ಕಾರು ಸಿಗುತ್ತಿತ್ತು” ಎಂದು ಕಿರುಕುಳ ಮುಂದುವರಿಸಿದ್ದರೆಂದು ಆರೋಪಿಸಿದ್ದಾರೆ.

ಹಲ್ಲೆ ಮತ್ತು ಸಾವು ;
ಎಫ್‌ಐಆರ್ ಪ್ರಕಾರ, ಜನವರಿ 22ರ ರಾತ್ರಿ 10ರಿಂದ 10.30ರ ನಡುವೆ ಪಶ್ಚಿಮ ದೆಹಲಿಯ ಮೋಹನ್ ಗಾರ್ಡನ್ ಎಕ್ಸ್ಟೆನ್ಷನ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ಕಾಜಲ್ ಮೇಲೆ ಹಲ್ಲೆ ನಡೆದಿದೆ. ಹಿಂದಿನಿಂದ ಭಾರಿಯಾದ ಡಂಬೆಲ್‌ನಿಂದ ತಲೆಗೆ ಹೊಡೆದ ಪರಿಣಾಮ, ದೇಹದ ಮೇಲೆ ಹಲವು ಗಾಯಗಳಾಗಿವೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಕಾಜಲ್ ಅವರನ್ನು ಗಾಜಿಯಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐದು ದಿನಗಳ ಬಳಿಕ ಜನವರಿ 27ರ ಬೆಳಗ್ಗೆ ಕೊನೆಯುಸಿರೆಳೆದರು. ಕೆಲವೇ ಗಂಟೆಗಳಲ್ಲಿ ಅಂಕುರ್ ಬಂಧನಕ್ಕೊಳಗಾಗಿದ್ದು, ಕೊಲೆ ಪ್ರಕರಣ ದಾಖಲಾಗಿದೆ.

ಹಿಂದೆಯೂ ಹಲ್ಲೆ ನಡೆದಿತ್ತು ;
ಸುಮಾರು ಐದು ತಿಂಗಳ ಹಿಂದೆ ಅಂಕುರ್ ಕಾಜಲ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿತ್ತು ಎನ್ನಲಾಗಿದೆ. “ಅವಳನ್ನು ಮನೆಗೆ ಕರೆತರಲು ಹೋದಾಗ ಅಂಕುರ್ ಕ್ಷಮೆ ಕೇಳಿ, ಮತ್ತೆ ಇಂತಹ ಕೆಲಸ ಮಾಡುವುದಿಲ್ಲ ಎಂದು ತನ್ನ ಮಗನ ಮೇಲೆ ಪ್ರಮಾಣ ಮಾಡಿದ್ದ,” ಎಂದು ನಿಖಿಲ್ ತಿಳಿಸಿದ್ದಾರೆ. ಗರ್ಭಿಣಿಯಾಗಿದ್ದರೂ ಕಾಜಲ್ ಮೇಲೆ ಮನೆ ಕೆಲಸಗಳ ಒತ್ತಡ ಇತ್ತು ಎಂದು ಕುಟುಂಬ ಆರೋಪಿಸಿದೆ.

ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ…

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು