ಗುಜರಾತ್ : ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಪ್ರದರ್ಶಿಸಲಾದ ಗುಜರಾತ್ ರಾಜ್ಯದ ಟ್ಯಾಬ್ಲೋ ‘ಜನಪ್ರಿಯ ಆಯ್ಕೆ’ (Popular Choice Category) ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. ಇದರೊಂದಿಗೆ ಗುಜರಾತ್ ರಾಜ್ಯವು ನಾಲ್ಕನೇ ಬಾರಿ ನಿರಂತರವಾಗಿ ಈ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಗೌರವ ಪಡೆದು ಇತಿಹಾಸ ನಿರ್ಮಿಸಿದೆ.
ಈ ಪ್ರಶಸ್ತಿಯ ಟ್ರೋಫಿ ಹಾಗೂ ಪ್ರಮಾಣಪತ್ರವನ್ನು ಇಂದು ನವದೆಹಲಿಯ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಅವರು ಪ್ರದಾನ ಮಾಡಿದರು. ಗುಜರಾತ್ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ. ವಿಕ್ರಾಂತ್ ಪಾಂಡೆ ಮತ್ತು ಮಾಹಿತಿ ಆಯುಕ್ತ ಕಿಶೋರ್ ಬಚಾನಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಇದನ್ನೂ ಓದಿ : Arjith Singh : ನಿವೃತ್ತಿ ಘೋಷಣೆ ಬಳಿಕ ಅರ್ಜಿತ್ ಸಿಂಗ್ ಮೊದಲ ಹಾಡು ನಾಳೆ ಬಿಡುಗಡೆ
ಸಾಂಸ್ಕೃತಿಕ ಪ್ರದರ್ಶನಕ್ಕೂ ವಿಶೇಷ ಗೌರವ ;
ಟ್ಯಾಬ್ಲೋ ನಿರ್ಮಾಣ ಪ್ರಕ್ರಿಯೆಯಲ್ಲಿ ದೇಶದ ವಿವಿಧ ರಾಜ್ಯಗಳ ಕಲಾವಿದರನ್ನು ಒಳಗೊಂಡಿದ್ದ ಗುಜರಾತ್ನ ಸಾಂಸ್ಕೃತಿಕ ನೃತ್ಯ ಪ್ರದರ್ಶನಕ್ಕೂ ರಾಷ್ಟ್ರೀಯ ರಂಗಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಶೇಷ ಮಾನ್ಯತೆ ಲಭಿಸಿದೆ. ‘ಸ್ವಾತಂತ್ರ್ಯತೆಯ ಮಂತ್ರ: ವಂದೇ ಮಾತರಂ’ ಥೀಮ್ ಎಂಬ ವಿಷಯಾಧಾರಿತವಾಗಿದ್ದು, ಇದನ್ನು ಗುಜರಾತ್ ಸರ್ಕಾರದ ಮಾಹಿತಿ ಆಯುಕ್ತರ ಕಚೇರಿ ರೂಪಿಸಿದೆ. ಈ ಯೋಜನೆಯನ್ನು ಮಾಹಿತಿ ಆಯುಕ್ತ ಕಿಶೋರ್ ಬಚಾನಿ ಹಾಗೂ ಹೆಚ್ಚುವರಿ ಮಾಹಿತಿ ನಿರ್ದೇಶಕ ಅರವಿಂದ್ ಪಟೇಲ್ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದ್ದು, ಸಂಯುಕ್ತ ಮಾಹಿತಿ ನಿರ್ದೇಶಕ ಡಾ. ಸಂಜಯ್ ಕಚೋಟ್ ಮತ್ತು ಉಪ ಮಾಹಿತಿ ನಿರ್ದೇಶಕಿ ಭಾವ್ನಾ ವಸಾವಾ (ಫಿಲ್ಮ್ ಪ್ರೊಡಕ್ಷನ್ ಶಾಖೆ) ಅವರ ಶ್ರಮದಿಂದ ಟ್ಯಾಬ್ಲೋ ರೂಪುಗೊಂಡಿದೆ.
ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

