ಬೆಂಗಳೂರು: ರಾಜ್ಯದಲ್ಲಿ ಬಿಸಿ ತುಪ್ಪವಾಗಿದ್ದ ಪರಿಶಿಷ್ಟ ಜಾತಿಗಳ (SC) ಒಳ ಮೀಸಲಾತಿ ಹಂಚಿಕೆಯನ್ನು ಅಂತಿಮಗೊಳಿಸಲು ಸಿದ್ದರಾಮಯ್ಯ ನೇತೃತ್ವದ ವಿಶೇಷ ಸಂಪುಟ ಸಭೆಯು ಇಂದು (ಏಪ್ರಿಲ್ 24) ಹಸಿರು ನಿಶಾನೆ ನೀಡಿದೆ. ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ, ಮೀಸಲಾತಿಯ ಲಾಭವು ಎಲ್ಲಾ ಉಪಜಾತಿಗಳಿಗೆ ಸಮಾನವಾಗಿ ತಲುಪಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಒಟ್ಟು ಶೇ. 15 ರಷ್ಟು ಮೀಸಲಾತಿಯನ್ನು ನಾಲ್ಕು ಮುಖ್ಯ ವಿಭಾಗಗಳಲ್ಲಿ ಈ ಕೆಳಗಿನಂತೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ:

ಪರಿಶಿಷ್ಟ ಜಾತಿ (ಎಡಗೈ – SC Left): ಶೇ. 5.3 (ಮಾದಿಗ ಮತ್ತು ಇತರ ಸಂಬಂಧಿತ ಸಮುದಾಯಗಳು)
ಪರಿಶಿಷ್ಟ ಜಾತಿ (ಬಲಗೈ – SC Right): ಶೇ. 5.3 (ಹೊಲಯ ಮತ್ತು ಇತರ ಸಂಬಂಧಿತ ಸಮುದಾಯಗಳು)

ಸ್ಪೃಶ್ಯ ಸಮುದಾಯಗಳು (Touchable Castes): ಶೇ. 3.4 (ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯಗಳು)
ಇತರ ಹಿಂದುಳಿದ ಗುಂಪುಗಳು: ಶೇ. 1 (ಅಲೆಮಾರಿ, ಅರೆ ಅಲೆಮಾರಿ ಮತ್ತು ಇತರ ಸಣ್ಣ ಸಮುದಾಯಗಳು)
ಇದನ್ನೂ ಓದಿ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಮತ್ತೆ ‘ಜನಿವಾರ’ ವಿವಾದ; ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಧಕ್ಕೆ, ಪೋಷಕರ ಆಕ್ರೋಶ!
ಈ ಒಳ ಮೀಸಲಾತಿ ಹಂಚಿಕೆ ಅಂತಿಮಗೊಂಡಿರುವುದರಿಂದ, ರಾಜ್ಯ ಸರ್ಕಾರದಲ್ಲಿ ಬಾಕಿ ಉಳಿದಿರುವ ಸುಮಾರು 56,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಇದ್ದ ಅತಿದೊಡ್ಡ ತಾಂತ್ರಿಕ ಅಡ್ಡಿ ನಿವಾರಣೆಯಾದಂತಾಗಿದೆ. ಇನ್ನು ಮುಂದೆ ಹೊರಬರುವ ಉದ್ಯೋಗ ಅಧಿಸೂಚನೆಗಳಲ್ಲಿ ಈ ಹೊಸ ಮೀಸಲಾತಿ ಅನ್ವಯವಾಗಲಿದೆ.
ಸರ್ಕಾರದ ನಿಲುವು:
“ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಈ ಹಂಚಿಕೆಯಿಂದಾಗಿ ಮೀಸಲಾತಿಯ ಸೌಲಭ್ಯ ಈವರೆಗೆ ಸಿಗದ ಕಟ್ಟಕಡೆಯ ಸಮುದಾಯಗಳಿಗೂ ತಲುಪಲಿದೆ” ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

