Breaking News

Bear attack causes : ಋಷಿಕೇಶದಲ್ಲಿ ಕಾಡು ಕರಡಿ ದಾಳಿ ಆತಂಕ: ಸಿಸಿಟಿವಿಯಲ್ಲಿ ಸೆರೆ

Bear attack causes panic in Rishikesh: Captured on CCTV, video goes viral

ಋಷಿಕೇಶ : ಬೆಟ್ಟ ಪ್ರದೇಶಗಳು ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಪ್ರಸಿದ್ಧವಾಗಿದ್ದರೂ, ಅಲ್ಲಿನ ಜನರು ಅನೇಕ ಕಠಿಣ ಸವಾಲುಗಳನ್ನು ಎದುರಿಸುತ್ತಾರೆ. ನೈಸರ್ಗಿಕ ಅಪಾಯಗಳು ಮತ್ತು ಕಾಡು ಪ್ರಾಣಿಗಳ ಭೀತಿಯು ಅಲ್ಲಿನ ಜೀವನದ ಅವಿಭಾಜ್ಯ ಭಾಗವಾಗಿದೆ. ಹೌದು… ಇಂತಹುದೇ ಒಂದು ಘಟನೆ ಹೊಸ ವರ್ಷದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದ ವೇಳೆ, ಋಷಿಕೇಶದಲ್ಲಿ ಆತಂಕ ಸೃಷ್ಟಿಸಿದೆ.

ಡಿಸೆಂಬರ್ 31ರ ಬುಧವಾರ ರಾತ್ರಿ, ಷ್ಯಾಂಪುರ್ ಹಾಟ್ ರಸ್ತೆ ಪ್ರದೇಶದ ವಸತಿ ಪ್ರದೇಶಕ್ಕೆ ಕಾಡು ಕರಡಿ ನುಗ್ಗಿದ್ದು, ಇಡೀ ನಗರದಲ್ಲಿ ಭಯದ ವಾತಾವರಣ ಉಂಟಾಯಿತು. ಹೊಸ ವರ್ಷದ ಸಂಭ್ರಮಕ್ಕೆ ಕೇವಲ ಎರಡು ಗಂಟೆ ಬಾಕಿ ಇರುವಾಗ ಈ ಘಟನೆ ಸಂಭವಿಸಿದ್ದು, ಅದರ ಸಿಸಿಟಿವಿ ದೃಶ್ಯಾವಳಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ವೈರಲ್ ವೀಡಿಯೊದಲ್ಲಿ ಏನಿದೆ?

ಡಿಸೆಂಬರ್ 31ರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದೆ. ವೀಡಿಯೊದಲ್ಲಿ ಇಬ್ಬರು ಪುರುಷರು ನಿರ್ಲಕ್ಷ್ಯವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ಅವರ ಹಿಂದೆ ಕೆಲವು ಹಸುಗಳು ಸಹ ಶಾಂತವಾಗಿ ತಿರುಗಾಡುತ್ತಿವೆ. ಅವರು ರಸ್ತೆ ತಿರುವಿನ ಬಳಿ ತಲುಪುತ್ತಿದ್ದಂತೆಯೇ, ಅಚಾನಕ್ ಕಾಡು ಕರಡಿ ಅವರ ಎದುರು ಕಾಣಿಸಿಕೊಂಡಿದೆ. ಕರಡಿಯನ್ನು ಕಂಡ ತಕ್ಷಣ ಬೆಚ್ಚಿಬಿದ್ದ ಇಬ್ಬರೂ ಭಯದಿಂದ ಹಿಂದಿರುಗಿ ಓಡಿದ್ದಾರೆ. ಹಸುಗಳೂ ಸಹ ಭಯಭೀತವಾಗಿ ಚದುರಿವೆ. ಕರಡಿ ಅವರನ್ನು ಹಿಂಬಾಲಿಸುತ್ತಾ ಓಡಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ :  ಕೋತಿ ಗ್ಯಾಂಗ್ ದಾಳಿಗೆ ಮಹಿಳೆ ಸ್ಥಳದಲ್ಲೇ ಸಾವು!

ಕರಡಿಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ವಿಫಲ ;
ವೀಡಿಯೊ ವೈರಲ್ ಆದ ಬಳಿಕ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ, ಕರಡಿ ಯಾವ ಮಾರ್ಗವಾಗಿ ನಗರ ಪ್ರದೇಶಕ್ಕೆ ಪ್ರವೇಶಿಸಿತು ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಸಿಸಿಟಿವಿ ದೃಶ್ಯಾವಳಿಯಿಂದ ಕರಡಿಯ ಇರುವಿಕೆ ದೃಢಪಟ್ಟಿದ್ದು, ಅರಣ್ಯ ಇಲಾಖೆ ಗಸ್ತು ಹೆಚ್ಚಿಸಿ, ಸ್ಥಳೀಯರಿಗೆ ಎಚ್ಚರಿಕೆ ಸೂಚನೆಗಳನ್ನು ನೀಡಿದೆ.

ಕರಡಿ ಎದುರಾದರೆ ಏನು ಮಾಡಬೇಕು?
ಕರಡಿಯೊಂದಿಗೆ ಮುಖಾಮುಖಿಯಾಗುವ ಸಂದರ್ಭಗಳಲ್ಲಿ ಅಪಾಯ ತಪ್ಪಿಸಿಕೊಳ್ಳಲು ಈ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು :
ಶಾಂತವಾಗಿರಿ : ಜೋರಾಗಿ ಕೂಗುವುದು ಅಥವಾ ಅಚಾನಕ್ ಓಡುವುದು ಕರಡಿಯನ್ನು ಕೋಪಗೊಳಿಸಬಹುದು
ನಿಧಾನವಾಗಿ ಹಿಂದಕ್ಕೆ ಸರಿಯಿರಿ: ಬೆನ್ನು ತೋರಿಸದೇ, ಕಣ್ಣು ಕಣ್ಣಿಗೆ ಸಂಪರ್ಕ ಕಾಯ್ದುಕೊಂಡು ನಿಧಾನವಾಗಿ ದೂರ ಸರಿಯಿರಿ, ಕೈಗಳನ್ನು ಎತ್ತಿ ಅಥವಾ ಜಾಕೆಟ್ ತೆರೆಯಿರಿ, ದುರ್ಬಲ ಎಂದು ತೋರಿಸಬೇಡಿ
ದಾಳಿ ಮಾಡಿದರೆ ರಕ್ಷಣೆ: ನೆಲಕ್ಕೆ ಬಿದ್ದು ಕೈಗಳಿಂದ ತಲೆಯನ್ನು ಮುಚ್ಚಿಕೊಳ್ಳಿ
ಸಹಾಯಕ್ಕೆ ಕರೆ ಮಾಡಿ: ತುರ್ತು ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿ ಅಥವಾ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು