Breaking News

ಪುತ್ತೂರಿನಲ್ಲಿ ರಾಷ್ಟ್ರಪ್ರೇಮದ ಪ್ರತೀಕ: ರಾಜ್ಯದ 3ನೇ ಅತಿದೊಡ್ಡ ಧ್ವಜಸ್ತಂಭ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ!

ಪುತ್ತೂರು: ಪುತ್ತೂರನ್ನು ಪ್ರವಾಸೋದ್ಯಮದ ಹಬ್ ಆಗಿ ರೂಪಿಸುವ ದೃಷ್ಟಿಯಿಂದ, ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ನಿರ್ಮಿಸಲಾದ ರಾಜ್ಯದ ಮೂರನೇ ಅತಿದೊಡ್ಡ ಧ್ವಜಸ್ತಂಭವನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಇಂದು ಉದ್ಘಾಟಿಸಿದರು. ಇದು ತಾಲೂಕು ಮಟ್ಟದಲ್ಲಿ ಸ್ಥಾಪನೆಯಾಗಿರುವ ರಾಜ್ಯದ ಮೊದಲ ಬೃಹತ್ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಧ್ವಜಸ್ತಂಭದ ವಿಶೇಷತೆಗಳು:

Advertisement

ಉದ್ದ: 80 ಮೀಟರ್ (ಸುಮಾರು 262 ಅಡಿ).

ಧ್ವಜದ ವಿಸ್ತೀರ್ಣ: 2,400 ಸ್ಕ್ವೇರ್ ಫೀಟ್ ವಿಸ್ತೀರ್ಣದ ಬೃಹತ್ ರಾಷ್ಟ್ರಧ್ವಜ ಇಲ್ಲಿ ಹಾರಾಡಿಸಲಾಗಿದೆ.

ವೆಚ್ಚ: ಶಾಸಕರ ಅನುದಾನ, ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಟ್ಟು 1 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

ಆಯುಷ್ಯ: ಈ ಧ್ವಜಸ್ತಂಭವು 40 ವರ್ಷಗಳ ಆಯುಷ್ಯವನ್ನು ಹೊಂದಿದೆ.

ಇದನ್ನೂ ಓದಿ: ಸ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ನೂತನ ಶೌಚಾಲಯ ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮ

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕರು, “ದೇಶವನ್ನು ವಿರೋಧಿಸುವವರನ್ನು ನಾವು ಸದಾ ವಿರೋಧಿಸಬೇಕು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ, ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ಬಿರುಮಲೆ ಬೆಟ್ಟದ ಅಭಿವೃದ್ಧಿ ನನ್ನ ಕನಸಿನ ಯೋಜನೆಗಳಾಗಿವೆ,” ಎಂದರು. ಅಲ್ಲದೆ, ವಿವಿಧ ನಿಗಮಗಳ ಅಧ್ಯಕ್ಷರು ಕೇವಲ ಕುರ್ಚಿ ಬಿಸಿ ಮಾಡದೆ ಪುತ್ತೂರಿನ ಅಭಿವೃದ್ಧಿಗೆ ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಮಾತನಾಡಿ, “ನೆಲ್ಲಿಕಟ್ಟೆಯ ಈ ಧ್ವಜಸ್ತಂಭ ಇಡೀ ಪುತ್ತೂರಿಗೆ ಹೆಮ್ಮೆಯ ಸಂಗತಿ. ಇದು ಪುತ್ತೂರಿನ ಸೌಹಾರ್ದತೆಯ ಸಂಕೇತವಾಗಿದೆ,” ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ವಿದ್ಯಾ ಎಂ. ಕಾಳೆ, ಉಮಾನಾಥ್ ಶೆಟ್ಟಿ ಸೇರಿದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಭಾಗವಹಿಸಿದ್ದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು