ಶನಿವಾರದಂದು ಎಳ್ಳು ದಾನ ಮಾಡಿದರೆ ಸಿಗಲಿದೆ ಅಪಾರ ಪುಣ್ಯ

ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿವಾರದ ದಿನವನ್ನು ಕರ್ಮಫಲ ದಾತನಾದ ಶನಿದೇವನಿಗೆ ಸಮರ್ಪಿಸಲಾಗಿದೆ. ಜಾತಕದಲ್ಲಿ ಶನಿ ಮಹಾದಶೆ, ಏಳೂವರೆ ಶನಿ (ಸಾಡೇಸಾತಿ) ಅಥವಾ ಧೈಯಾ ಇ ತೊಂದರೆಗಳಿಂದ ಬಳಲುತ್ತಿರುವವರು ಶನಿವಾರದ ದಿನ ಕೆಲವು ವಿಶೇಷ ದಾನಗಳನ್ನು ಮಾಡುವುದರಿಂದ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಅದರಲ್ಲೂ ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಸಿಗುವ ಅದ್ಭುತ ಲಾಭಗಳ ಕುರಿತಾದ ಮಾಹಿತಿ ಇಲ್ಲಿದೆ.

ಶನಿವಾರ ಎಳ್ಳು ದಾನ ಮಾಡುವುದರಿಂದ ಆಗುವ ಪ್ರಮುಖ ಲಾಭಗಳು

ಶನಿ ದೋಷಗಳಿಂದ ಮುಕ್ತಿ: ಕಪ್ಪು ಎಳ್ಳು ಶನಿದೇವನಿಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ. ಶನಿವಾರದಂದು ನಿರ್ಗತಿಕರಿಗೆ ಅಥವಾ ದೇವಸ್ಥಾನದಲ್ಲಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಜಾತಕದಲ್ಲಿರುವ ಸಾಡೇಸಾತಿ ಹಾಗೂ ರಾಹು-ಕೇತುಗಳ ನಕಾರಾತ್ಮಕ ಪ್ರಭಾವ ಕಡಿಮೆಯಾಗುತ್ತದೆ.

ಆರೋಗ್ಯ ಸುಧಾರಣೆ ಮತ್ತು ಆಯುಷ್ಯ ವೃದ್ಧಿ: ಜ್ಯೋತಿಷ್ಯದ ಪ್ರಕಾರ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ಶನಿವಾರದಂದು ಎಳ್ಳನ್ನು ದಾನ ಮಾಡುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಇದು ಅಕಾಲಿಕ ಮರಣದ ಭಯವನ್ನು ದೂರವಾಗಿಸಿ ಆಯುಷ್ಯವನ್ನು ವೃದ್ಧಿಸುತ್ತದೆ ಎಂದು ನಂಬಲಾಗಿದೆ.

ಆರ್ಥಿಕ ಸಂಕಷ್ಟಗಳ ನಿವಾರಣೆ: ವ್ಯಾಪಾರದಲ್ಲಿ ನಷ್ಟ ಅಥವಾ ಸಾಲದ ಬಾಧೆಯಿಂದ ಬಳಲುತ್ತಿರುವವರು ಶನಿವಾರದಂದು ಎಣ್ಣೆಯೊಂದಿಗೆ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಹಾಗೂ ಸ್ಥಗಿತಗೊಂಡಿರುವ ಕಾರ್ಯಗಳು ಪುನರಾರಂಭಗೊಳ್ಳುತ್ತವೆ.

ಪಿತೃ ದೋಷ ನಿವಾರಣೆ: ಎಳ್ಳನ್ನು ಕೇವಲ ಶನಿದೇವರ ಪೂಜೆಗಷ್ಟೇ ಅಲ್ಲದೆ, ಪಿತೃ ದೇವತೆಗಳ ತರ್ಪಣಕ್ಕೂ ಬಳಸಲಾಗುತ್ತದೆ. ಶನಿವಾರದಂದು ಎಳ್ಳನ್ನು ದಾನ ಮಾಡುವುದರಿಂದ ಪಿತೃ ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ.

ಇದನ್ನೂ ಓದಿ: ದೇವಸ್ಥಾನಕ್ಕೆ ಹೋಗುವಾಗ ಈ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ

ದಾನ ಮಾಡುವಾಗ ವಹಿಸಬೇಕಾದ ಜಾಗ್ರತೆ:

ಶನಿವಾರದಂದು ಕಪ್ಪು ಎಳ್ಳು, ಸಾಸಿವೆ ಎಣ್ಣೆ ಅಥವಾ ಕಪ್ಪು ಕಡಲೆಯನ್ನು ದಾನ ಮಾಡುವುದು ಶ್ರೇಷ್ಠ. ಆದರೆ ನೆನಪಿರಲಿ, ಶನಿವಾರದ ದಿನದಂದು ಸ್ವತಃ ಕಪ್ಪು ಎಳ್ಳು ಅಥವಾ ಎಣ್ಣೆಯನ್ನು ಮನೆಗೆ ಖರೀದಿಸಿಕೊಂಡು ಬರಬಾರದು. ಅದಕ್ಕೆ ಬದಲಾಗಿ ಮೊದಲೇ ಖರೀದಿಸಿಟ್ಟ ಎಳ್ಳನ್ನು ಶನಿವಾರದ ದಿನ ದಾನಕ್ಕೆ ಬಳಸಬೇಕು.

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *