ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಧಾರ್ಮಿಕ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ಎನ್ನಲಾದ ಅತ್ಯಂತ ವಿಶಿಷ್ಟ ಅಭಿಯಾನವೊಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕೇವಲ ಹತ್ತು ದಿನಗಳ ಈ ಕಿರು ಅವಧಿಯಲ್ಲಿ ನಗರದಾದ್ಯಂತ ಸುಮಾರು ಹನ್ನೆರಡೂವರೆ ಟನ್ ಧಾರ್ಮಿಕ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.
ಈ ಅಭಿಯಾನವು ಕೇವಲ ಕಸ ಸಂಗ್ರಹಣೆಗೆ ಸೀಮಿತವಾಗಿರದೆ, ಹಳೆಯದಾದ ದೇವರ ಫೋಟೋಗಳು, ವಿಗ್ರಹಗಳು, ಗಂಟೆಗಳು ಹಾಗೂ ದೀಪಗಳಂತಹ ಪವಿತ್ರ ವಸ್ತುಗಳಿಗೆ ಶಾಸ್ತ್ರೋಕ್ತವಾಗಿ ಮತ್ತು ಸಂಸ್ಕಾರಪೂರ್ವಕವಾಗಿ ವಿದಾಯ ನೀಡುವ ಕೆಲಸ ಮಾಡಿದೆ.

ಇದನ್ನೂ ಓದಿ: ಮಂಗಳೂರು: ಗ್ಯಾಸ್ ದರ ಏರಿಕೆಗೆ ಹೋಟೆಲ್ ಮಾಲೀಕರ ಆಕ್ರೋಶ; ಒಂದೇ ದಿನದಲ್ಲಿ 993 ರೂ. ಜಂಪ್!
ಎಲ್ಲೆಂದರಲ್ಲಿ ಎಸೆಯಲ್ಪಟ್ಟು ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದ ಧಾರ್ಮಿಕ ವಸ್ತುಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಮೂಲಕ ಮಂಗಳೂರು ನಗರದ ಸ್ವಚ್ಛತೆಗೆ ಹೊಸ ಆಯಾಮ ನೀಡಲಾಗಿದೆ. ಕೇವಲ 10 ದಿನಗಳಲ್ಲಿ ಇಷ್ಟು ಬೃಹತ್ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿರುವುದು ಸಾರ್ವಜನಿಕರ ಉತ್ತಮ ಸ್ಪಂದನೆಗೆ ಸಾಕ್ಷಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

