ಬಂಟ್ವಾಳ: ಕರಾವಳಿಯ ವಿಶಿಷ್ಟ ಆಟಿ ತಿಂಗಳ ಆಹಾರ ಪದ್ಧತಿ ಹಾಗೂ ಸಂಸ್ಕೃತಿಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ “ಆಟಿದ ವನಸ್” ವಿಶೇಷ ಕಾರ್ಯಕ್ರಮವು (ಆಗಸ್ಟ್ 12) ಅತ್ಯಂತ ವೈಭವದಿಂದ ಜರುಗಿತು.
ಆಟಿ ತಿಂಗಳಿನಲ್ಲಿ ತುಳುನಾಡಿನ ಮನೆಮನೆಗಳಲ್ಲಿ ತಯಾರಿಸುವ ಅಪರೂಪದ ಹಾಗೂ ಆರೋಗ್ಯಕರ ಸಾಂಪ್ರದಾಯಿಕ ಖಾದ್ಯಗಳನ್ನು ವಿದ್ಯಾರ್ಥಿಗಳು ಸ್ವತಃ ತಮ್ಮ ಮನೆಗಳಿಂದಲೇ ತಯಾರಿಸಿಕೊಂಡು ತಂದಿದ್ದರು. ಕಾಲೇಜಿನ ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಒಂದಾಗಿ ಕುಳಿತು ಸಹಭೋಜನ ನಡೆಸುವ ಮೂಲಕ ‘ಆಟಿದ ವನಸ್’ ಸಂಪ್ರದಾಯವನ್ನು ಕಣ್ಣುಂಬಿಕೊಂಡರು.

ಕಾರ್ಯಕ್ರಮದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಬಬಿತಾ ಅವರು ವಿದ್ಯಾರ್ಥಿಗಳಿಗೆ ಕರಾವಳಿಯ ಆಟಿ ತಿಂಗಳ ಪರಂಪರೆ, ಆಹಾರ ಸಂಸ್ಕೃತಿ ಹಾಗೂ ಅದರ ಹಿಂದೆ ಇರುವ ವೈಜ್ಞಾನಿಕ-ಆರೋಗ್ಯಕರ ಮಹತ್ವವನ್ನು ವಿವರವಾಗಿ ತಿಳಿಸಿಕೊಟ್ಟರು.
ಇದನ್ನೂ ಓದಿ: ‘ಅಟಲ್ ಟಿಂಕರಿಂಗ್ ಲ್ಯಾಬ್ ಫೆಸ್ಟ್ – ಸವಿಸ್ಕಾರ್ 2K26’ ಮುಕ್ತಾಯ: ಬಾಲ ವಿಕಾಸ ಶಾಲೆ ಮಾಣಿಗೆ ಸಮಗ್ರ ಪ್ರಶಸ್ತಿ
ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರಕಟ್ಟೆ, ಅಧ್ಯಕ್ಷರಾದ ನಾರಾಯಣ ಸೋಮಯಾಜಿ ಹಾಗೂ ಶ್ರೀರಾಮ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಅವರು ಉಪಸ್ಥಿತರಿದ್ದರು. ಬಿಸಿಎ (BCA) ವಿಭಾಗದ ವಿದ್ಯಾರ್ಥಿ ಜಯಸೂರ್ಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

