ರಾಘವ್ ಛಡ್ಡಾ ಸೇರಿ 7 ಮಂದಿ ಬಿಜೆಪಿ ಸೇರ್ಪಡೆ: ಎಎಪಿ ಒಳಗಿನ ಸಮಸ್ಯೆ ಬೊಟ್ಟು ಮಾಡಿದ ಅಣ್ಣಾ ಹಜಾರೆ

anna-hazare-criticises-raghav-chadha-bjp-join

ನವದೆಹಲಿ/ಅಹಿಲ್ಯನಗರ: ಆಮ್ ಆದ್ಮಿ ಪಕ್ಷ (AAP) ತೊರೆದು ಬಿಜೆಪಿ ಸೇರ್ಪಡೆಗೊಂಡ ರಾಘವ್ ಚಡ್ಡಾ ಅವರ ನಿರ್ಧಾರವನ್ನು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತೀವ್ರವಾಗಿ ಟೀಕಿಸಿದ್ದಾರೆ. ಸ್ವಾರ್ಥದ ಕಾರಣಕ್ಕಾಗಿ ಪಕ್ಷ ಬದಲಾಯಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಸುದ್ದಿ ಸಂಸ್ಥೆ ANIಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹಜಾರೆ, “ಒಂದು ಪಕ್ಷವನ್ನು ಬಿಟ್ಟು ಮತ್ತೊಂದು ಪಕ್ಷ ಸೇರುವುದು ಸರಿಯಲ್ಲ. ವೈಯಕ್ತಿಕ ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷ ಬದಲಾಯಿಸುವುದು ತಪ್ಪು. ಇದು ನಮ್ಮ ಸಂವಿಧಾನದಲ್ಲಿಲ್ಲ. ನಮ್ಮ ದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ” ಎಂದು ಹೇಳಿದರು.

Advertisement

ಅದೇ ವೇಳೆ, AAP ಪಕ್ಷದ ಒಳಗಿನ ಸಮಸ್ಯೆಗಳೂ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂಬ ಸೂಚನೆಯನ್ನು ನೀಡಿದರು. “ಪಕ್ಷವು ಸರಿಯಾದ ಮಾರ್ಗದಲ್ಲಿ ನಡೆದಿದ್ದರೆ, ನಾಯಕರು ಪಕ್ಷ ತೊರೆಯುತ್ತಿರಲಿಲ್ಲ. ಇದರಲ್ಲಿ ಪಕ್ಷದ ನಾಯಕತ್ವದ ತಪ್ಪೂ ಇದೆ” ಎಂದು ಹಜಾರೆ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಆಮ್ ಆದ್ಮಿ ಪಾರ್ಟಿಗೆ ಬಿಗ್ ಶಾಕ್: ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ರಾಘವ್ ಚಡ್ಡಾ ಮತ್ತು ಪ್ರಮುಖ ಸಂಸದರು!

Advertisement

ಇನ್ನೂ ಮಾತನಾಡಿದ ಅವರು, “ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೊಂದುವ ಹಕ್ಕು ಇದೆ. ಅವರು ಯಾವ ಕಾರಣಕ್ಕಾಗಿ ಪಕ್ಷ ಬಿಟ್ಟಿದ್ದಾರೆ ಎಂಬುದು ಅವರ ವೈಯಕ್ತಿಕ ವಿಷಯ” ಎಂದರು.

ಇದೇ ವೇಳೆ, ರಾಘವ್ ಚಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರು ದೆಹಲಿಯಲ್ಲಿ ಸಂಯುಕ್ತ ಪತ್ರಿಕಾಗೋಷ್ಠಿಯಲ್ಲಿ AAP ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಚಡ್ಡಾ ಅವರು, AAPನ ರಾಜಸಭಾ ಸದಸ್ಯರಲ್ಲಿನ ಬಹುಪಾಲು ತಮ್ಮೊಂದಿಗೆ ಪಕ್ಷ ತೊರೆದು ಹೊಸ ಗುಂಪಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆ AAP ಪಕ್ಷದ ಒಳರಾಜಕೀಯದಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು