ದಕ್ಷಿಣ ಕನ್ನಡ
ಪಾಂಡೇಶ್ವರ ಠಾಣೆಯ ಎಎಸ್ಐ ಹರಿಶ್ಚಂದ್ರ ಬೇರಿಕೆ ನಿಧನ
ಪಾಂಡೇಶ್ವರ ಠಾಣೆಯ ಎಎಸ್ಐ ಹರಿಶ್ಚಂದ್ರ ಬೇರಿಕೆ (57) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. 10 ವರ್ಷದ ಹಿಂದೆ ಎಎಸ್ಐ ಆಗಿ ಭಡ್ತಿ ಪಡೆದಿದ್ದರು.
Read MorePuttur: ಮೂರು ದಿನಗಳ ಕೃಷಿ ಮೇಳ – ಸಸ್ಯ ಜಾತ್ರೆ ಸಮಾರೋಪ
ಕೃಷಿಕ ಸಮಾಜದ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಗದ್ದೆಯಲ್ಲಿ ಆಯೋಜಿಸಲಾದ ಮೂರು ದಿನಗಳ ಕೃಷಿ ಮೇಳ ಹಾಗೂ ಸಸ್ಯ ಜಾತ್ರೆ ಜ. 12 ರಂದು ಸಮಾರೋಪಗೊಂಡಿತು. ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್, ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಾಲಯ, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಅರಿವು ಕೇಂದ್ರ ಹಾಗೂ ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗಿತ್ತು.
Read MoreSullia : ಸುಳ್ಯ ಜಾತ್ರೆಯ ಪ್ರಯುಕ್ತ ನಡೆಯಬೇಕಿದ್ದ ಕೋಳಿಅಂಕ ಈ ಬಾರಿ ನಿಷೇಧ
ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುತ್ತಿರುವ ಎಸ್.ಪಿ.ಅರುಣ್ ಅವರು ಯಾವುದೇ ಕೋಳಿಅಂಕಕ್ಕೆ ಅನುಮತಿ ನೀಡುತ್ತಿಲ್ಲವಾದ ಹಿನ್ನಲೆಯಲ್ಲಿ ಸುಳ್ಯದಲ್ಲಿ ಕೋಳಿ ಅಂಕ ರದ್ದಾಗಿರುವುದಾಗಿ ತಿಳಿದು ಬಂದಿದೆ. ಪ್ರತಿ ವರ್ಷ ಸುಳ್ಯ ಜಾತ್ರೆಯ ಕೊಡಿ ಇಳಿದ ಬಳಿಕ ಸಂಕ್ರಮಣದ ಮರುದಿನದಿಂದ ಮೂರು ದಿನ ಗದ್ದೆಯಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಸಾವಿರಾರು ಮಂದಿ ಈ ಕೋಳಿಅಂಕದಲ್ಲಿ ಭಾಗವಹಿಸುತ್ತಿದ್ದರು. ಆದರೆ, ಈ ಬಾರಿ ಕೋಳಿ ಅಂಕ ನಡೆಯುವುದಿಲ್ಲವೆಂದು ತಿಳಿದು ಬಂದಿದೆ.
Read MoreBantwal : ಕಲ್ಲಡ್ಕ ಶ್ರೀರಾಮ ಪ.ಪೂ. ಕಾಲೇಜಿನಲ್ಲಿ ವಿವೇಕ ಜಯಂತಿ ಕಾರ್ಯಕ್ರಮ
ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿವೇಕ ಜಯಂತಿ 2026 ರ ಕಾರ್ಯಕ್ರಮವನ್ನು, ಜ.೧೨ ರಂದು ಅಜಿತ ಕುಮಾರ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ದೇಶಭಕ್ತಿ ಗಾಯನದ ಮೂಲಕ ಚಾಲನೆ ನೀಡಲಾಯಿತು.
Read Moreಕಡಬ: ಮನೆಯಂಗಳದಲ್ಲಿ ಚಿರತೆಯ ಓಡಾಟ ಸಿಸಿಟಿವಿಯಲ್ಲಿ ಸೆರೆ
ಎಡಮಂಗಲ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿ ದ್ದು, ಅರಣ್ಯ ಅಧಿಕಾರಿಗಳಿಗೆ ಎಚ್ಚೆತ್ತುಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Read Moreಮೋಂತಿಮಾರು ಶಬರಿಗಿರಿ ಅಯ್ಯಪ್ಪ ಮಾಲಾಧಾರಿಗಳ ನಡೆ ಶಬರಿಮಲೆ ಕಡೆ
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರಿನಲ್ಲಿರುವ ಶಬರಿಗಿರಿ ಅಯ್ಯಪ್ಪ ಭಕ್ತ ವೃಂದದ ಮಾಲಾಧಾರಿಗಳು ಇಂದು ಅಯ್ಯಪ್ಪನ ಆಲಯ ಶಬರಿಮಲೆಗೆ ತೆರಳಿದರು.
Read Moreನ್ಯೂ ಇಂಡಿಯಾ ಲಕ್ಕಿ ಸ್ಕೀಂ ವಂಚನೆ ಪ್ರಕರಣ: ಮಂಗಳೂರಿನಲ್ಲಿ ಪ್ರತಿಭಟನೆ
ನ್ಯೂ ಇಂಡಿಯಾ ಲಕ್ಕೀ ಸ್ಕೀಂ ಹೆಸರಿನಲ್ಲಿ ನಡೆದ ವಂಚನೆ ಪ್ರಕರಣ ಸಂಬಂಧ ಹಣ ಕಳೆದುಕೊಂಡ ಸಂತ್ರಸ್ತರು ಜ.15 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಪ್ರತಿಭಟನಾ ಪ್ರದರ್ಶನ ನಡೆಸಲು ಮುಂದಾಗಿದ್ದಾರೆ.
Read Moreಪುತ್ತೂರಿನಲ್ಲಿ ಉದ್ಘಾಟನೆಗೊಂಡ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ-ಸಸ್ಯ ಜಾತ್ರೆ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಜಾತ್ರಾ ಗದ್ದೆಯಲ್ಲಿ ಇಂದಿನಿಂದ (ಜ.10) ಮೂರು ದಿನಗಳ ಕಾಲ ಕೃಷಿ ಮೇಳ ಮತ್ತು ಸಸ್ಯ ಜಾತ್ರೆ ನಡೆಯಲಿದೆ. ಈ ಮೇಳವನ್ನು ಕೃಷಿ ಸಚಿವರು ಉದ್ಘಾಟಿಸಿದರು.
Read Moreಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣ: ಪ್ರಧಾನ ಅರ್ಚಕ ಅರೆಸ್ಟ್
ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಮೂಲ್ಯ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕ (ತಂತ್ರಿ) ಕಂದರಾರು ರಾಜೀವರಾರು ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿದೆ.
Read MoreBangalore : B-ಖಾತಾ ಆಸ್ತಿಗಳಿಗೆ A-ಖಾತಾ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅಕ್ರಮ/ಅನುಮತಿ ಇಲ್ಲದ ಲೇಔಟ್ಗಳಲ್ಲಿನ ಬಿ ಖಾತಾ ಆಸ್ತಿಗಳ ಮಾಲೀಕರಿಗೆ ಎ ಖಾತಾ ಸ್ಥಾನಮಾನ ನೀಡುವ ಮೂಲಕ ಪರಿಹಾರ ವಿಸ್ತರಿಸಲು ರಾಜ್ಯ ಸರ್ಕಾರವು ಗುರುವಾರ ತೀರ್ಮಾನಿಸಿದೆ. ಎ ಖಾತಾ ಎನ್ನುವುದು ನಗರ ಸ್ಥಳೀಯ ಸಂಸ್ಥೆಗಳು (ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ ಇತ್ಯಾದಿ) ನೀಡುವ ಅಧಿಕೃತ ಆಸ್ತಿ ನೋಂದಣಿ ಪ್ರಮಾಣ ಪತ್ರ. ಇದು ಆಸ್ತಿ ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದು, ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿದೆ ಎಂಬುದನ್ನು ದೃಢಪಡಿಸುತ್ತದೆ.
Read More
