ಮಂಗಳೂರು: ತುಳುನಾಡಿನ ಸಮುದ್ರ ತೀರ ಮತ್ತು ನದಿಗಳು ಒಂದು ಕಾಲದಲ್ಲಿ ಹಡಗು ನಿರ್ಮಾಣದ ಪರಂಪರೆಗೆ ಸಾಕ್ಷಿಯಾಗಿದ್ದವು. ಅರೇಬಿಯನ್ ಸಮುದ್ರ ದಾಟಿದ ಹಡಗುಗಳ ಕಥೆಗಳು ಇತಿಹಾಸದಲ್ಲಿ ಉಳಿದಿದ್ದರೂ, ಕಾಲಕ್ರಮೇಣ ಆ ಪರಂಪರೆ ಮಂಕಾಯಿತು. ಆದರೆ ಈಗ ಮಂಗಳೂರಿನಲ್ಲಿ ಹಡಗು ನಿರ್ಮಾಣ ಕ್ಷೇತ್ರ ಮತ್ತೆ ಚೇತರಿಕೆ ಕಾಣುತ್ತಿದ್ದು, ಆ ವೈಭವ ಮತ್ತೆ ಜೀವಂತವಾಗುತ್ತಿದೆ.
ಒಮ್ಮೆ ಸ್ಥಗಿತಗೊಂಡಿದ್ದ ಮೆರಿಟೈಮ್ ಸೌಲಭ್ಯವನ್ನು ಚೌಗುಲೆ ಶಿಪ್ಯಾರ್ಡ್ ಪುನರುಜ್ಜೀವನಗೊಳಿಸಿದ್ದು, ಇದೀಗ ಅದನ್ನು ಆಧುನಿಕ ಹಡಗು ನಿರ್ಮಾಣ ಕೇಂದ್ರವಾಗಿ ರೂಪಿಸಿದೆ. ಈ ಘಟಕದಿಂದ ನಿರ್ಮಿತವಾದ ಮೊದಲ ಹಡಗು ‘ಫ್ರಿಶಿಯನ್ ಫ್ಯೂಚರ್’ (FRISIAN FUTURE) ಈಗ ಯಶಸ್ವಿಯಾಗಿ ವಿತರಣೆಯಾಗಿದೆ.

ಸುಮಾರು 8,500 ಡೆಡ್ವೈಟ್ ಟನ್ನೇಜ್ (DWT) ಹೊಂದಿರುವ ಈ ಹಡಗು ಜಾಗತಿಕ ವ್ಯಾಪಾರಕ್ಕಾಗಿ ಮಂಗಳೂರಿನಲ್ಲಿ ನಿರ್ಮಾಣಗೊಂಡಿದೆ. ಇದು ಕೇವಲ ತಾಂತ್ರಿಕ ಸಾಮರ್ಥ್ಯವನ್ನಷ್ಟೇ ತೋರಿಸುವುದಲ್ಲ, ಸ್ಥಳೀಯ ಉದ್ಯಮ, ಉದ್ಯೋಗಾವಕಾಶಗಳು ಮತ್ತು ಕರಾವಳಿ ಪ್ರದೇಶದ ಆತ್ಮವಿಶ್ವಾಸವನ್ನು ಪುನರುಜ್ಜೀವನಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡಕ್ಕೆ ಕೇಂದ್ರದ ಬಂಪರ್ ಕೊಡುಗೆ: NH 73 ಅಭಿವೃದ್ಧಿಗೆ 64 ಕೋಟಿ ರೂ. ಮಂಜೂರು; ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾಹಿತಿ

Long before modern shipyards, the rivers and coasts of Tulunadu built vessels that sailed across the Arabian Sea. Over time, that legacy faded into memory. Today, with the revival of shipbuilding in Mangalore, that relationship with the sea is finding form once again.
Wonderful… pic.twitter.com/guMWL2vxyu
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) April 19, 2026
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೆರಿಟೈಮ್ ಕ್ಷೇತ್ರದ ಬಲವರ್ಧನೆ ದೃಷ್ಟಿಯಡಿ, ಮಂಗಳೂರು ಈಗ ಭಾರತದಲ್ಲಿ ಪ್ರಮುಖ ಹಡಗು ನಿರ್ಮಾಣ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಜಾಗತಿಕ ಮಟ್ಟದ ಆರ್ಡರ್ಗಳು ಈ ಪ್ರದೇಶಕ್ಕೆ ಹರಿದುಬರುತ್ತಿರುವುದು ಗಮನಾರ್ಹವಾಗಿದೆ.
ಇದರೊಂದಿಗೆ, ಹಡಗು ನಿರ್ಮಾಣ ಕ್ಷೇತ್ರದ ಕಂಪನಿಗಳಿಗೆ ಮಂಗಳೂರು ತೆರೆದ ಆಹ್ವಾನ ನೀಡಲಾಗಿದ್ದು, “ಮಂಗಳೂರಿನಲ್ಲಿ ನಿರ್ಮಿಸಿ, ವಿಶ್ವದತ್ತ ಸಾಗಿರಿ” ಎಂಬ ಸಂದೇಶ ನೀಡಲಾಗಿದೆ. ಜೊತೆಗೆ, ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನವರಿಗೂ “Back to Ooru” ಕರೆ ನೀಡಲಾಗಿದೆ — ತಮ್ಮ ಊರಿಗೆ ಮರಳಿ, ಹಳೆಯ ಪರಂಪರೆಯನ್ನು ಮತ್ತೆ ಕಟ್ಟಲು ಆಹ್ವಾನಿಸಲಾಗಿದೆ.
ಮಂಗಳೂರು ಮತ್ತೊಮ್ಮೆ ತನ್ನ ಸಮುದ್ರ ಪರಂಪರೆಯನ್ನು ವಿಶ್ವದ ಮುಂದೆ ಮೆರೆಯಲು ಸಜ್ಜಾಗುತ್ತಿದೆ ಎಂದು ಸಂಸದರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

