ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.5 ರಂದು ಕಾವೇರಿ ನೀರು ಸರಬರಾಜು ಬಂದ್

Disruption in Cauvery water supply in these areas of Bengaluru on Feb. 5

ಬೆಂಗಳೂರು: ಫೆಬ್ರವರಿ 5ರಿಂದ 24 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಪ್ರಕಟಿಸಿದೆ. ದಕ್ಷಿಣ ಮತ್ತು ಮಧ್ಯ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.

ಬಿಡಬ್ಲ್ಯುಎಸ್‌ಎಸ್‌ಬಿ ಮಾಹಿತಿ ಪ್ರಕಾರ, ಕಾವೇರಿ ಜಲ ಸರಬರಾಜು ಯೋಜನೆಯ ಹಂತ–1 ಮತ್ತು ಹಂತ–2 ಪಂಪಿಂಗ್ ಸ್ಟೇಷನ್‌ಗಳನ್ನು ಫೆಬ್ರವರಿ 5ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 6ರ ಬೆಳಗ್ಗೆ 6 ಗಂಟೆಯವರೆಗೆ ಸ್ಥಗಿತಗೊಳಿಸಲಾಗುತ್ತದೆ.

Advertisement

ಈ 24 ಗಂಟೆಗಳ ಅವಧಿಯಲ್ಲಿ ಹಲವೆಡೆ ನೀರು ಸಂಪೂರ್ಣವಾಗಿ ನಿಲ್ಲುವ ಅಥವಾ ಅತಿ ಕಡಿಮೆ ಒತ್ತಡದಲ್ಲಿ ಸರಬರಾಜಾಗುವ ಸಾಧ್ಯತೆ ಇದೆ. ಮನೆಮಠಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮುಂಗಡವಾಗಿ ನೀರು ಸಂಗ್ರಹಿಸಿಕೊಳ್ಳುವಂತೆ ಮಂಡಳಿ ಮನವಿ ಮಾಡಿದೆ. ಈ ಕೆಳಗಿನ ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ದಕ್ಷಿಣ ಬೆಂಗಳೂರು (ಭಾಗ–1)

Advertisement

ಮಾಗಡಿ ರಸ್ತೆ, ಕದ್ರೆನಹಳ್ಳಿ, ಮಿನಾಜ್ ನಗರ, ಗಂಗಾಧರ್ ನಗರ, ಪ್ರಗತಿಪುರ, ಪದ್ಮನಾಭನಗರ, ಆರ್.ಕೆ. ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೆಂದ್ರೆ ನಗರ

ದಕ್ಷಿಣ ಬೆಂಗಳೂರು (ಭಾಗ–2)

ಕುಮಾರಸ್ವಾಮಿ ಲೇಔಟ್ 1 ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಲೇಔಟ್, ವಿಟ್ಟಲ್ ನಗರ, ಇಸ್ರೋ ಲೇಔಟ್, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯ ರಸ್ತೆ ಪ್ರದೇಶಗಳು

ದಕ್ಷಿಣ ಬೆಂಗಳೂರು (ಭಾಗ–3)

ಉತ್ತರಹಳ್ಳಿ, ಕೆ.ಎಸ್.ಆರ್.ಟಿ.ಸಿ ಲೇಔಟ್, ಅಂಕಪ್ಪ ಲೇಔಟ್, ಗುಮ್ಮಯ್ಯ ಲೇಔಟ್, ಬನಶಂಕರಿ 5ನೇ ಹಂತ, ಎ.ಜಿ.ಎಸ್ ಲೇಔಟ್, ಸರ್ವಭೌಮನಗರ, ಸುಬ್ರಮನ್ಯಪುರ

ಇದನ್ನೂ ಓದಿ: Bengaluru: ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಡೆಡ್‌ಲೈನ್‌! ತಪ್ಪಿದರೆ ಆಸ್ತಿ ಹರಾಜು

ಮಧ್ಯ ಬೆಂಗಳೂರು (ಭಾಗ–1)

ಬಿ.ಎಚ್.ಸಿ.ಎಸ್ ಲೇಔಟ್, ಕ್ಯಾನರಾ ಬ್ಯಾಂಕ್ ಕಾಲೋನಿ, ಕಾಕತೀಯ ನಗರ, ಸುಡಗುಂಟ ಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್, ವೆಂಕಟೇಶ್ವರ ಲೇಔಟ್

ಮಧ್ಯ ಬೆಂಗಳೂರು (ಭಾಗ–2)

ಬೃಂದಾವನ ಲೇಔಟ್, ಮಡಿವಾಳ, ಚಿನ್ನಮ್ಮ ಲೇಔಟ್, ಕೋರಮಂಗಲ 2, 4, 5, 6, 7 ಮತ್ತು 8ನೇ ಬ್ಲಾಕ್‌ಗಳು

ಮಧ್ಯ ಬೆಂಗಳೂರು (ಭಾಗ–3)

ಚಿಕ್ಕ ಅಡುಗೋಡಿ, ಸೇಂಟ್ ಜಾನ್ಸ್ ಆಸ್ಪತ್ರೆ ಸುತ್ತಮುತ್ತ, ರಾಜೇಂದ್ರ ನಗರ, ಅಡುಗೋಡಿ, ಜಾನ್ಸನ್ ಮಾರ್ಕೆಟ್, ಶಾಂತಿನಗರ, ಲಾಂಗ್‌ಫೋರ್ಡ್ ಟೌನ್, ರಿಚ್ಮಂಡ್ ಟೌನ್

ಮಧ್ಯ ಬೆಂಗಳೂರು (ಭಾಗ–4)

ನೀಲಸಂದ್ರ, ಅಶೋಕ ನಗರ, ಆಸ್ಟಿನ್ ಟೌನ್, ವಿವೇಕ್ ನಗರ, ಎಜಿಪುರ, ಡೊಮ್ಲೂರು ಲೇಔಟ್, ಡೊಮ್ಲೂರು ಗ್ರಾಮ, ಕೊಡಿಹಳ್ಳಿ, ಜೋಗಿಪಾಳ್ಯ, ಕೇಂಬ್ರಿಡ್ಜ್ ಲೇಔಟ್

ಇತರೆ ಪ್ರದೇಶಗಳು

ಚಾಮರಾಜಪೇಟೆ, ಶ್ರೀನಗರ, ಬನಶಂಕರಿ 1ನೇ ಹಂತ, ಜಯನಗರ 4ನೇ ಮತ್ತು ‘ಟಿ’ ಬ್ಲಾಕ್, ತಿಲಕ್ ನಗರ, ಮಾಧವನ್ ಪಾರ್ಕ್, ಹೊಂಬೇಗೌಡ ನಗರ, ಲಕ್ಕಸಂದ್ರ, ಜಗಜೀವನರಾಮನಗರ

ಹೆಚ್ಚುವರಿ ಪ್ರದೇಶಗಳು

ಮಾವಳ್ಳಿ, ಶಂಕರಪುರಂ, ಕೆಂಪೇಗೌಡನಗರ, ಸುಧಾಮನಗರ, ಜಯನಗರ 5ರಿಂದ 9ನೇ ಬ್ಲಾಕ್, ಯಡಿಯೂರು, ಇಟ್ಟಮಡು, ಹೊಸಕೆರಹಳ್ಳಿ, ಜೆಪಿ ನಗರ 1–3ನೇ ಹಂತ, ವಿಲ್ಸನ್ ಗಾರ್ಡನ್, ನಿಂಹಾನ್ಸ್ ಸುತ್ತಮುತ್ತ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು