ಪುತ್ತೂರು: ಕಾರ್ಪಾಡಿ ಸುಬ್ರಹ್ಮಣ್ಯಶ್ವರ ಯುವಕ ಮಂಡಲದ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ಸಂಘದ ಕಛೇರಿಯಲ್ಲಿ ನಡೆಯಿತು. ಬಾಲಚಂದ್ರ ದೇವಸ್ಯರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವ ಅಧ್ಯಕ್ಷರಾಗಿ ಬಾಲಚಂದ್ರ ದೇವಸ್ಯ, ಅಧ್ಯಕ್ಷರಾಗಿ ಸಂದೀಪ್ ಆರ್ಯಾಪು, ಉಪಾಧ್ಯಕ್ಷರಾಗಿ ಭವಿತ್ ರೈ ಮಲಾರು, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ನಡುಮನೆ, ಜೊತೆ ಕಾರ್ಯದರ್ಶಿಯಾಗಿ ಗೌತಮ್ ನೀರ್ಕಜೆ, ಕೋಶಾಧಿಕಾರಿಯಾಗಿ ಲಿಖಿತ್ ಅಡ್ಕ, ಭಜನಾ ಉಸ್ತುವಾರಿಯಾಗಿ ಕಾರ್ತಿಕ್ ಆರ್ಯಾಪು ಅವರನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಶ್ರೀ ಸರಸ್ವತಿ ಸೌಹಾರ್ದ ಸಂಘದ ಅಧ್ಯಕ್ಷರಾಗಿ ಸಹಕಾರ ರತ್ನ ಸತೀಶ್ಚಂದ್ರ, ಉಪಾಧ್ಯಕ್ಷರಾಗಿ ಉಮೇಶ್ ಪ್ರಭು ಪುನರಾಯ್ಕೆ
ಸಂಘಟನಾ ಕಾರ್ಯದರ್ಶಿಗಳಾಗಿ ಚೇತನ್ ಗೌಡ, ವಿನಯ ನಾಯ್ಕ, ಮನೋಜ್ ಕಾರ್ಪಾಡಿ, ಪೂವಪ್ಪ ಗೌಡ, ಹರೀಶ್ ಕಾರ್ಪಡಿ, ಅಶೋಕ್ ದೇವಸ್ಯ, ಸಂದೀಪ್ ಸಂಟ್ಯಾರು, ಕ್ರೀಡಾ ಕಾರ್ಯದರ್ಶಿಗಳಾಗಿ ವಿಕಾಸ್ ಎಂ., ತನುಷ್ ಕಾರ್ಪಾಡಿ, ಗೌರವ ಸಲಹೆಗಾರರಾಗಿ ಸುಧಾಕರ್ ರಾವ್, ದೇವಯ್ಯ, ಕುಶಾಲಪ್ಪ ಗೌಡ ದೇವಸ್ಯ, ದುಗ್ಗಪ್ಪ ಗೌಡ, ತಿಮ್ಮಪ್ಪ ಪೂಜಾರಿ, ಶಾಂತಪ್ಪ ಪೂಜಾರಿ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಂದೀಪ್ ಆರ್ಯಪು ಹಾಗೂ ಸದಸ್ಯರಾದ ರೋಹಿತ್, ಪೂವಪ್ಪ ಗೌಡ, ಅಶೋಕ್ ದೇವಸ್ಯ, ಸಂತಪ್ಪ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

