ಸರಸ್ವತಿ ಸೌಹಾರ್ದ ಚುನಾವಣೆ: ಸತೀಶ್ಚಂದ್ರ ತಂಡ ಕ್ಲೀನ್ ಸ್ವೀಪ್, ಯಾರ್ಯಾರಿಗೆ ಎಷ್ಟೆಷ್ಟು ಮತ?

ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಸತೀಶ್ಚಂದ್ರ ಎಸ್. ಆರ್. ನೇತೃತ್ವದ ತಂಡ 12 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

ಸಹಕಾರಿಯ ಆಡಳಿತ ಮಂಡಳಿಯ ಒಟ್ಟು 12 ಸ್ಥಾನಗಳಿಗೆ ಸತೀಶ್ಚಂದ್ರ ನೇತೃತ್ವದ ತಂಡದಿಂದ 12 ಮಂದಿ ಹಾಗೂ ಸುನಿಲ್ ಬೋರ್ಕರ್ ತಂಡದಿಂದ 7 ಮಂದಿ ಕಣಕ್ಕಿಳಿದಿದ್ದರು. ಈ ಪೈಕಿ ಹಿಂದುಳಿದ (2A) ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆ ಉಮೇಶ್ ಪ್ರಭು ಕುಂಟಿಹಿತ್ಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಆ ಮೂಲಕ ಸತೀಶ್ಚಂದ್ರ ತಂಡಕ್ಕೆ ಮೊದಲ ಗೆಲುವು ಸಿಕ್ಕಿತ್ತು.

Advertisement

ಉಳಿದ 11 ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಸತೀಶ್ಚಂದ್ರ ನೇತೃತ್ವದ ತಂಡದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ತಂಡದ ಎದುರಾಳಿ ಸ್ಪರ್ಧಿಗಳಾಗಿ ಸುನಿಲ್ ಬೋರ್ಕರ್ ನೇತೃತ್ವದಲ್ಲಿ ಕಣಕ್ಕಿಳಿದ 7 ಮಂದಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಚುನಾವಣಾಧಿಕಾರಿ ತ್ರಿವೇಣಿ ಅವರು ಫಲಿತಾಂಶ ಘೋಷಿಸಿದರು.

ಒಟ್ಟು ಮತಚಲಾವಣೆ: 1039

Advertisement

ಸತೀಶ್ಚಂದ್ರ ತಂಡದ ಅಭ್ಯರ್ಥಿಗಳು ಪಡೆದ ಮತಗಳು

ಸತೀಶ್ಚಂದ್ರ ಎಸ್.ಆರ್- 807

ಹರೀಶ್ ಬೋರ್ಕರ್ ಕತ್ತಲಕಾನ- 720

ರಾಜಗೋಪಾಲ್ ಬಾಳೆಗುಳಿ- 742

ರವೀಶ ಪೊಸವಳಿಕೆ- 785

ವಿ.ವಸಂತ ಶಂಕರ್- 820

ವೇದವ್ಯಾಸ ಕಟ್ಟೆ- 773

ಸಂಜೀವ ನಾಯಕ್ ಸುಳ್ಯ- 750

ಚಂದ್ರಶೇಖರ ಭಟ್ ಮುಂಡುಗಾರು- 831

ದಯಾನಂದ ನಾಯಕ್ ಕುಂಟಿಕಾನ- 773

ದೇವಕಿ ಎಚ್. ನಾಯಕ್ ವಾಗ್ಲೆ ಸಂಟ್ಯಾರು- 769

ರಂಜಿತಾ ಆರ್. ಪ್ರಭು ಗೊಳಿತ್ತಡಿ- 796

ಸುನಿಲ್ ಬೋರ್ಕರ್ ತಂಡದ ಅಭ್ಯರ್ಥಿಗಳು ಪಡೆದ ಮತಗಳು

ಸುನಿಲ್ ಬೋರ್ಕರ್ ಮುಂಡಕೊಚ್ಚಿ- 270

ಸುಬ್ರಹ್ಮಣ್ಯ ಕೆ.- 188

ಎಸ್.ರಾಧಾಕೃಷ್ಣ ನಾಯಕ್ ದಾಸನಕಜೆ- 242

ಜಯರಾಮ್ ಪಿ.- 264

ಪ್ರಕಾಶ್ ಪಂಜಿಗಾರು- 237

ಶ್ರೀಧರ್ ಪಿ.- 201

ಅರುಣ ಎಸ್- 324

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು