Breaking News

ಶ್ರೀನಗರದಲ್ಲಿ ಪೂರ್ಣ ‘ವಂದೇ ಮಾತರಂ’ ವಿವಾದ: ಕಾಂಗ್ರೆಸ್ ವಿರುದ್ಧ ಮೈತ್ರಿಪಕ್ಷ ಎನ್‌ಸಿ, ಬಿಜೆಪಿ ತೀವ್ರ ಆಕ್ರೋಶ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ಚಲನಚಿತ್ರೋತ್ಸವ ಕಾರ್ಯಕ್ರಮವೊಂದರಲ್ಲಿ ಪೂರ್ಣ ಪ್ರಮಾಣದ ‘ವಂದೇ ಮಾತರಂ’ ರಾಷ್ಟ್ರಗೀತೆಯನ್ನು ಹಾಡಿದ್ದಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರವೀಗ ಮೈತ್ರಿಪಕ್ಷಗಳ ನಡುವೆ ಹಾಗೂ ಬಿಜೆಪಿ-ಕಾಂಗ್ರೆಸ್ ನಡುವೆ ಭಾರಿ ರಾಜಕೀಯ ಸಮರಕ್ಕೆ ಕಾರಣವಾಗಿದೆ.

ಶ್ರೀನಗರದಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಸಮ್ಮುಖದಲ್ಲಿ ‘ವಂದೇ ಮಾತರಂ’ ಗೀತೆಯ ಸಂಪೂರ್ಣ ಆವೃತ್ತಿಯನ್ನು (೬ ಚರಣಗಳು) ನುಡಿಸಲಾಯಿತು. ಇದಕ್ಕೆ ಸಾಮಾಜಿಕ ಜಾಲತಾಣ ‘X’ ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್.

“ಸಂಪೂರ್ಣ ವಂದೇ ಮಾತರಂ ಗೀತೆಯು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕನಸು ಕಂಡ ಭಾರತದ ಬಹುಸಂಸ್ಕೃತಿ ಹಾಗೂ ಜಾತ್ಯತೀತ ತತ್ವಗಳಿಗೆ ಸರಿ ಹೊಂದುವುದಿಲ್ಲ.” “ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್ ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯಂತೆ ಅಂಗೀಕರಿಸಲಾದ ಗೀತೆಯ ಚುಟುಕು ಆವೃತ್ತಿಗೆ (ಮೊದಲ ಎರಡು ಚರಣಗಳು) ಮಾತ್ರ ಕಾಂಗ್ರೆಸ್ ಬದ್ಧವಾಗಿದೆ.” ಮೈತ್ರಿಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಕೂಡ ಇದೇ ನಿಲುವಿಗೆ ಬದ್ಧವಾಗಿರಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ನ ಈ ಹೇಳಿಕೆಗೆ ಮೈತ್ರಿಪಕ್ಷ ನ್ಯಾಷನಲ್ ಕಾನ್ಫರೆನ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ನಾವು ಮೈತ್ರಿಕೂಟದಲ್ಲಿದ್ದೇವೆ ಎಂದ ಮಾತ್ರಕ್ಕೆ ಏನು ಹಾಡಬೇಕು, ಎಷ್ಟು ಹಾಡಬೇಕು ಎಂದು ಕಾಂಗ್ರೆಸ್ ನಮಗೆ ಷರತ್ತು ವಿಧಿಸಲು ಸಾಧ್ಯವಿಲ್ಲ. ಜನರಿಗೆ ಏನು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಯಾವುದನ್ನೂ ಯಾರ ಮೇಲೆಯೂ ಬಲವಂತವಾಗಿ ಹೇರುವುದನ್ನು ನಾವು ವಿರೋಧಿಸುತ್ತೇವೆ.” ಎಂದು ಎನ್‌ಸಿ ನಾಯಕ
ಬಶೀರ್ ಅಹಮದ್ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ಸ್ಕೇಟಿಂಗ್: ಶ್ರೀರಾಮ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಕಪಿಲ್ ಸಿಂಗ್, “ಎನ್‌ಸಿ ನಾಯಕರು ಆರ್‌ಎಸ್‌ಎಸ್‌ನ ಆರ್‌ಎಸ್‌ಎಸ್ ನಾಗ್‌ಪುರ ಪೀಠದ ನಿರ್ದೇಶನಗಳಿಗೆ ತಲೆಬಾಗದೆ ‘ಇಂಡಿಯಾ’ ಮೈತ್ರಿಕೂಟದ ತತ್ವಗಳಿಗೆ ಗೌರವ ನೀಡಬೇಕು” ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಿಲುವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ, ಕಾಂಗ್ರೆಸ್‌ನ್ನು ‘೨೧ನೇ ಶತಮಾನದ ಮುಸ್ಲಿಂ ಲೀಗ್’ ಎಂದು ಕರೆದಿದೆ. “ವಂದೇ ಮಾತರಂ ಸಂಪೂರ್ಣ ಆವೃತ್ತಿಗೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಸಂಪೂರ್ಣವಾಗಿ ಒಂಟಿಯಾಗಿದೆ. ‘ದಿಮಾಗಿ ನಕ್ಸಲ್’ ಆಗಿದ್ದ ಕಾಂಗ್ರೆಸ್ ಈಗ ಮೂಲಭೂತವಾದಿ ಶಕ್ತಿಗಳಿಗೆ ಶರಣಾಗಿ ‘ಮುಸ್ಲಿಂ ಲೀಗ್ ಕಾಂಗ್ರೆಸ್’ ಆಗಿ ಬದಲಾಗಿದೆ.” ಬಿಜೆಪಿ ಸಂಸದ ಹಾಗೂ ವಕ್ತಾರ ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ.

“ಕಾಶ್ಮೀರ ಕಣಿವೆಯ ಪ್ರತ್ಯೇಕತಾವಾದಿಗಳು ಕೂಡ ವಂದೇ ಮಾತರಂಗೆ ಆಕ್ಷೇಪ ಎತ್ತಿರಲಿಲ್ಲ, ಆದರೆ ಕಾಂಗ್ರೆಸ್ ರಾಜಕೀಯಕ್ಕಾಗಿ ಈ ಮಟ್ಟಕ್ಕೆ ಇಳಿದಿದೆ.” ಎಂದು ಬಿಜೆಪಿ ನಾಯಕ ಆರ್.ಎಸ್. ಪಠಾನಿಯಾ ಹೇಳಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *