ನವದೆಹಲಿ: ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ಗೆ (ISS) ಭೇಟಿ ನೀಡಿದ ಮೊದಲ ಭಾರತೀಯ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜ.26ರಂದು ಭಾರತದ ಅತ್ಯಂತ ಉನ್ನತ ಶೌರ್ಯ ಪ್ರಶಸ್ತಿಯಾಗಿರುವ ಅಶೋಕ ಚಕ್ರ ಪ್ರದಾನ ಮಾಡಿದರು.
ಇದನ್ನೂ ಓದಿ : Puttur: ಕ್ಯಾಂಪ್ಕೋ ಯೂನಿಯನ್ನ ನೂತನ ಪದಾಧಿಕಾರಿಗಳ ಆಯ್ಕೆ, ಮಹಾಸಭೆ

ಅಂತರಿಕ್ಷಕ್ಕೆ ಎರಡನೇ ಹಾಗೂ ISSಗೆ ಪ್ರವೇಶಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಶುಭಾಂಶು ಶುಕ್ಲ ಅವರದ್ದಾಗಿದೆ. ರಾಕೇಶ್ ಶರ್ಮಾ ಅವರ ನಂತರ ಅಂದರೆ, 41 ವರ್ಷಗಳ ನಂತರ ಶುಭಾಂಶು ಅವರು ಈ ಸಾಧನೆ ಮಾಡಿದ್ದಾರೆ. ಪೈಲಟ್ ಆಗಿರುವ ಶುಕ್ಲಾ ಅವರಲ್ಲಿ ವಿವಿಧ ವಿಮಾನಗಳಲ್ಲಿ 2,000 ಗಂಟೆಗಳಿಗಿಂತ ಹೆಚ್ಚು ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 70 ಯೋಧರಿಗೆ ಪ್ರಶಸ್ತಿಗಳನ್ನು (1 ಅಶೋಕ ಚಕ್ರ, 3 ಕೀರ್ತಿ ಚಕ್ರ, 13 ಶೌರ್ಯ ಚಕ್ರ,) ಪ್ರದಾನ ಮಾಡಿದರು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

