ಆರೋಗ್ಯದ ಕುರಿತು ಮುಜುಗರ ಮತ್ತು ಮೌನವು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ವೃಷಣ ಕ್ಯಾನ್ಸರ್ ಕುರಿತು ಮುಕ್ತವಾಗಿ ಮಾತನಾಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಈ ಕ್ಯಾನ್ಸರ್ ಅಪರೂಪವಾದರೂ, 15ರಿಂದ 40 ವರ್ಷದೊಳಗಿನ ಯುವಕರಲ್ಲಿ ಹೆಚ್ಚು ಕಂಡುಬರುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಅದರ ಪ್ರಮಾಣ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಈ ರೋಗಕ್ಕೆ 95% ಕ್ಕಿಂತ ಹೆಚ್ಚು ಗುಣಮುಖತೆ ಸಾಧ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ ನಾಳೆ ಕರಾವಳಿ ಕರ್ನಾಟಕದಲ್ಲಿ ಜನರ ನೆತ್ತಿ ಸುಡಲಿದೆ ಬಿಸಿಲು!, ಬೀಸಲಿದೆ ಗಾಳಿ
ವೃಷಣದಲ್ಲಿ ನೋವಿಲ್ಲದ ಗಡ್ಡೆ ,ಊತ, ಗಾತ್ರದಲ್ಲಿ ಬದಲಾವಣೆ ಅಥವಾ ಕೆಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ. ಪ್ರತಿಯೊಬ್ಬ ಪುರುಷರೂ ತಿಂಗಳಿಗೆ ಒಮ್ಮೆ ಸ್ವಯಂ ಪರಿಶೀಲನೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಮುಜುಗರ, ಭಯ ಮತ್ತು ಅರಿವು ಕೊರತೆಗಳಿಂದ ಹಲವರು ವೈದ್ಯಕೀಯ ಸಹಾಯ ಪಡೆಯುವುದನ್ನು ತಡಮಾಡುತ್ತಿರುವುದು ರೋಗವನ್ನು ಗಂಭೀರ ಹಂತಕ್ಕೆ ತಳ್ಳುತ್ತಿದೆ. ಆದ್ದರಿಂದ “ಮೌನ ಬಿಟ್ಟು ಮಾತನಾಡಿ, ಸಮಯಕ್ಕೆ ಪರೀಕ್ಷೆ ಮಾಡಿಸಿಕೊಳ್ಳಿ” ಎಂಬುದೇ ತಜ್ಞರ ಮುಖ್ಯ ಸಂದೇಶವಾಗಿದೆ.
ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ


