Mangalore : ಎಸ್‌ಟಿ ಸಮುದಾಯಕ್ಕಾಗಿ ರಾಜ್ಯಮಟ್ಟದ ವೆಬ್ ಡೆವಲಪ್‌ಮೆಂಟ್ ಕೋರ್ಸ್‌ಗೆ ಆಗ್ನೆಸ್ ಕಾಲೇಜಿನಲ್ಲಿ ಚಾಲನೆ

ಮಂಗಳೂರು : ಮಂಗಳೂರು ಆಗ್ನೆಸ್ ಕಾಲೇಜು, ಎಸ್‌ಟಿ ಸಮುದಾಯದವರಿಗಾಗಿ ವಿಶೇಷವಾಗಿ ರೂಪುಗೊಳಿಸಿದ ಕೋಡಿಂಗ್ ಇಲ್ಲದ ವೆಬ್‌ಸೈಟ್ ಅಭಿವೃದ್ಧಿ ಕುರಿತ ರಾಜ್ಯಮಟ್ಟದ ಪ್ರಮಾಣಪತ್ರ ಕೋರ್ಸ್‌ಗೆ ಚಾಲನೆ ನೀಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವಿಭಾಗ ಹಾಗೂ ಐಕ್ಯೂಎಸಿ (IQAC) ಸಂಯುಕ್ತವಾಗಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಐಐಐಟಿ ಹೈದರಾಬಾದ್‌ನ iHub – Data ಪ್ರಾಯೋಜಕತ್ವ ವಹಿಸಿದೆ. ಡಿಜಿಟಲ್ ಸಾಕ್ಷರತೆ ಮತ್ತು ಕೌಶಲಾಭಿವೃದ್ಧಿಯ ಮೂಲಕ ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

Read More

ಕೆಎಸ್‌ಆರ್‌ಟಿಸಿ ಪ್ರೀಮಿಯರ್ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸರ್ಕಾರದಿಂದ ಗಿಫ್ಟ್

ಬೆಂಗಳೂರು: ಬೆಂಗಳೂರು-ಮಂಗಳೂರು ಸೇರಿದಂತೆ ಆಯ್ದ ಕೆಲವು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಮಾರ್ಚ್‌ವರೆಗೆ ಪ್ರೀಮಿಯರ್ ಬಸ್‌ಗಳಲ್ಲಿ ಶೇ.5 ರಿಂದ ಶೇ.15 ಟಿಕೆಟ್ ದರ ಕಡಿತಗೊಳಿಸಿ ಸರ್ಕಾರ ಕೊಡುಗೆ ನೀಡಿದೆ. ಕೆಎಸ್‌ಆರ್‌ಟಿಸಿ ನಿಗಮದ ಪ್ರತಿಷ್ಠಿತ ಸಾರಿಗೆಗಳ ಅಥವಾ ಪ್ರೀಮಿಯರ್ ಬಸ್‌ಗಳ ಪ್ರಯಾಣ ದರಗಳಲ್ಲಿ ಶೇ.5-15 ರಿಯಾಯಿತಿ ಘೋಷಿಸಿದ್ದು, ಜನವರಿಯಿಂದ ಮಾರ್ಚ್‌ವರೆಗೆ ಪ್ರಯಾಣಿಕರ ದಟ್ಟಣೆ ಕಡಿಮೆಯಿರುವ ಹಿನ್ನೆಲೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಆದರೆ ಈ ದರ ವಾರದ ದಿನಗಳಲ್ಲಿ ಮಾತ್ರ ಅನ್ವಯವಾಗುತ್ತದೆ. ವಾರಾಂತ್ಯಗಳಲ್ಲಿ ಅನ್ವವಾಗುವುದಿಲ್ಲ. ಇದನ್ನೂ ಓದಿ : Digital

Read More

PUC Exam: ಗಣಿತ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್!

ಇಂದಿನ ಪಿಯುಸಿ ಪ್ರಿಪರೆಟ್ರಿ ಗಣಿತ ಪರೀಕ್ಷೆಗೆ ನಿಗದಿಪಡಿಸಿದ್ದ ಪ್ರಶ್ನೆ ಪತ್ರಿಕೆ ಹಿಂದಿನ ದಿನವೇ ವಾಟ್ಸಾಪ್ ಮೂಲಕ ವ್ಯಾಪಕವಾಗಿ ಹರಡಿತ್ತು. ಆದರೂ, ಪೂರ್ವ ವಿಶ್ವವಿದ್ಯಾಲಯ ಪರೀಕ್ಷಾ ಮಂಡಳಿ (ಪಿಯು ಬೋರ್ಡ್) ಯಾವುದೇ ಬದಲಾವಣೆ ಮಾಡದೆ ಅದೇ ಪ್ರಶ್ನೆ ಪತ್ರಿಕೆಯನ್ನು ಬಳಸಿ ಪರೀಕ್ಷೆಯನ್ನು ನಡೆಸಿದೆ ಎಂಬ ಆರೋಪ ಕೇಳಿಬರುತ್ತಿದೆ.

Read More