ರಾಜ್ಯ
Mangalore : ಎಸ್ಟಿ ಸಮುದಾಯಕ್ಕಾಗಿ ರಾಜ್ಯಮಟ್ಟದ ವೆಬ್ ಡೆವಲಪ್ಮೆಂಟ್ ಕೋರ್ಸ್ಗೆ ಆಗ್ನೆಸ್ ಕಾಲೇಜಿನಲ್ಲಿ ಚಾಲನೆ
ಮಂಗಳೂರು : ಮಂಗಳೂರು ಆಗ್ನೆಸ್ ಕಾಲೇಜು, ಎಸ್ಟಿ ಸಮುದಾಯದವರಿಗಾಗಿ ವಿಶೇಷವಾಗಿ ರೂಪುಗೊಳಿಸಿದ ಕೋಡಿಂಗ್ ಇಲ್ಲದ ವೆಬ್ಸೈಟ್ ಅಭಿವೃದ್ಧಿ ಕುರಿತ ರಾಜ್ಯಮಟ್ಟದ ಪ್ರಮಾಣಪತ್ರ ಕೋರ್ಸ್ಗೆ ಚಾಲನೆ ನೀಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವಿಭಾಗ ಹಾಗೂ ಐಕ್ಯೂಎಸಿ (IQAC) ಸಂಯುಕ್ತವಾಗಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಐಐಐಟಿ ಹೈದರಾಬಾದ್ನ iHub – Data ಪ್ರಾಯೋಜಕತ್ವ ವಹಿಸಿದೆ. ಡಿಜಿಟಲ್ ಸಾಕ್ಷರತೆ ಮತ್ತು ಕೌಶಲಾಭಿವೃದ್ಧಿಯ ಮೂಲಕ ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
Read Moreಕೆಎಸ್ಆರ್ಟಿಸಿ ಪ್ರೀಮಿಯರ್ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸರ್ಕಾರದಿಂದ ಗಿಫ್ಟ್
ಬೆಂಗಳೂರು: ಬೆಂಗಳೂರು-ಮಂಗಳೂರು ಸೇರಿದಂತೆ ಆಯ್ದ ಕೆಲವು ಮಾರ್ಗಗಳಲ್ಲಿ ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಮಾರ್ಚ್ವರೆಗೆ ಪ್ರೀಮಿಯರ್ ಬಸ್ಗಳಲ್ಲಿ ಶೇ.5 ರಿಂದ ಶೇ.15 ಟಿಕೆಟ್ ದರ ಕಡಿತಗೊಳಿಸಿ ಸರ್ಕಾರ ಕೊಡುಗೆ ನೀಡಿದೆ. ಕೆಎಸ್ಆರ್ಟಿಸಿ ನಿಗಮದ ಪ್ರತಿಷ್ಠಿತ ಸಾರಿಗೆಗಳ ಅಥವಾ ಪ್ರೀಮಿಯರ್ ಬಸ್ಗಳ ಪ್ರಯಾಣ ದರಗಳಲ್ಲಿ ಶೇ.5-15 ರಿಯಾಯಿತಿ ಘೋಷಿಸಿದ್ದು, ಜನವರಿಯಿಂದ ಮಾರ್ಚ್ವರೆಗೆ ಪ್ರಯಾಣಿಕರ ದಟ್ಟಣೆ ಕಡಿಮೆಯಿರುವ ಹಿನ್ನೆಲೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಆದರೆ ಈ ದರ ವಾರದ ದಿನಗಳಲ್ಲಿ ಮಾತ್ರ ಅನ್ವಯವಾಗುತ್ತದೆ. ವಾರಾಂತ್ಯಗಳಲ್ಲಿ ಅನ್ವವಾಗುವುದಿಲ್ಲ. ಇದನ್ನೂ ಓದಿ : Digital
Read MorePUC Exam: ಗಣಿತ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್!
ಇಂದಿನ ಪಿಯುಸಿ ಪ್ರಿಪರೆಟ್ರಿ ಗಣಿತ ಪರೀಕ್ಷೆಗೆ ನಿಗದಿಪಡಿಸಿದ್ದ ಪ್ರಶ್ನೆ ಪತ್ರಿಕೆ ಹಿಂದಿನ ದಿನವೇ ವಾಟ್ಸಾಪ್ ಮೂಲಕ ವ್ಯಾಪಕವಾಗಿ ಹರಡಿತ್ತು. ಆದರೂ, ಪೂರ್ವ ವಿಶ್ವವಿದ್ಯಾಲಯ ಪರೀಕ್ಷಾ ಮಂಡಳಿ (ಪಿಯು ಬೋರ್ಡ್) ಯಾವುದೇ ಬದಲಾವಣೆ ಮಾಡದೆ ಅದೇ ಪ್ರಶ್ನೆ ಪತ್ರಿಕೆಯನ್ನು ಬಳಸಿ ಪರೀಕ್ಷೆಯನ್ನು ನಡೆಸಿದೆ ಎಂಬ ಆರೋಪ ಕೇಳಿಬರುತ್ತಿದೆ.
Read MoreDigital Tickets : ಭಾರತೀಯ ರೈಲ್ವೆ ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ಆಕರ್ಷಕ ರಿಯಾಯಿತಿ
ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ‘ರೈಲ್ವನ್ ’ ಮೂಲಕ ಬುಕ್ ಮಾಡುವ ಜನರಲ್ ಟಿಕೆಟ್ಗಳಿಗೆ ಶೇಕಡಾ 3 ರಷ್ಟು ಪಾವತಿ ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿ ಯೋಜನೆ ಜನವರಿ 14ರಿಂದ ಜುಲೈ 14ರವರೆಗೆ, ಆರು ತಿಂಗಳ ಅವಧಿಗೆ ಜಾರಿಗೆ ಇರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Read MoreMangalore : ಮಾಫಿಯಾ ವಿರುದ್ಧ ಹೋರಾಡಿದ ನಿಷ್ಠಾವಂತ ಪೋಲಿಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಾ ?
ಕಳೆದ ಆರು ತಿಂಗಳಿಂದ ಶಾಂತಿಯುತ ಕಾನೂನು–ಸುವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದರೂ, ಬೆಟ್ಟಿಂಗ್, ಮಾಫಿಯಾ ಜಾಲಗಳು ಹಾಗೂ ಕೆಲ ರಾಜಕೀಯ ನಾಯಕರ ಒತ್ತಡದಿಂದ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ಅರುಣ್ ಅವರನ್ನು ವರ್ಗಾವಣೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
Read MoreAramboor : ಅರಂಬೂರಿನ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಮೃತ್ಯು
ಬೈಕ್ ಅಪಘಾತದಲ್ಲಿ ಗಂಭೀತ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿರುವುದು ವರದಿಯಾಗಿದೆ. ಬೈಕ್ ಚಲಾಯಿಸಿಕೊಂಡು ಅರಂಬೂರು ರಸ್ತೆಯಲ್ಲಿ ಹೋಗುತ್ತಿದ್ದಾಗ, ರಸ್ತೆ ಬದಿ ತಡೆಬೇಲಿಗೆ ಗುದ್ದಿ ರಸ್ತೆಗೆ ಎಸೆಯಲ್ಪಟ್ಟರೆನ್ನಲಾಗಿದೆ. ಪರಿಣಾಮ ಬೈಕ್ ಪಲ್ಟಿಯಾಗಿ ಸಲ್ಮಾನ್ ರಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
Read Moreವಿವಿಧ ಕ್ಷೇತ್ರಗಳಲ್ಲಿನ ಸಾಧನೆಗೆ ಸಹಕಾರ ರತ್ನ ಎಸ್ಆರ್ ಸತೀಶ್ಚಂದ್ರರಿಗೆ ಸನ್ಮಾನ
ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಎಸ್.ಆರ್.ಸತೀಶ್ಚಂದ್ರ ಅವರನ್ನು ಆಡಳಿತ ಮಂಡಳಿ ಸದಸ್ಯರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
Read Moreಅಖಿಲ ಭಾರತ ಗೇರು ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಗಂಗಾಧರ ನಾಯಕ್ ಆಯ್ಕೆ
ಅಖಿಲ ಭಾರತ ಗೇರು ಬೆಳೆಗಾರರ ಸಂಘದ (AICGA) ಅಧ್ಯಕ್ಷರನ್ನಾಗಿ ಗಂಗಾಧರ ನಾಯಕ್ ಎಂ. ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿಯನ್ನಾಗಿ ವಿಶ್ವ ಕೇಶವ ಕುರುವೇರಿ ಅವರನ್ನು ಆಯ್ಕೆ ಮಾಡಲಾಗಿದೆ.
Read Moreಕುಕ್ಕಾಜೆಯಲ್ಲಿ ಇಂದಿರಾ ದರ್ಶಿನಿ ಸಹಕಾರಿ ಸಂಘ ಉದ್ಘಾಟನೆ
ಮಂಚಿ ಗ್ರಾಮದ ಕುಕ್ಕಾಜೆ ಸಮೀಪದ ಪತ್ತುಮುಡಿಯ ಅಲೀಮಾ ಪ್ಲಾಝ ಸಂಕೀರ್ಣದಲ್ಲಿ ಬಂಟ್ವಾಳ, ಉಳ್ಳಾಲ ಹಾಗೂ ಮಂಗಳೂರು ವ್ಯಾಪ್ತಿಗೊಳಪಟ್ಟು ಸ್ಥಾಪಿಸಲಾದ ಇಂದಿರಾ ದರ್ಶಿನಿ ಸಹಕಾರಿ ಸಂಘವನ್ನು ಜ.4 ರಂದು ಉದ್ಘಾಟಿಸಲಾಯಿತು.
Read Moreಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ಸಂಪನ್ನ
ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಜನವರಿ ೩ ರಂದು ನಡೆಯಿತು. ಮುಂಜಾನೆ ರಾಷ್ಟ್ರ ವಿಜಯ ಯಜ್ಞ, ಮಧ್ಯಾಹ್ನ ಶ್ರೀ ದೇವಿಗೆ ಮಹಾಮಂಗಳಾರತಿ ನಡೆಯಿತು. ಸಂಜೆ ಭಜನಾ ಕಮ್ಮಟ, ರಾತ್ರಿ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
Read More
