ದಕ್ಷಿಣ ಕನ್ನಡ
Puttur : ಜ.12-13ರಂದು ವಿವೇಕಾನಂದ ಕಾಲೇಜಿನಲ್ಲಿ ವಿವೇಕ ಜಯಂತಿ, ಶತ ಜಯಘೋಷ ಪಥಸಂಚಲನ
ವಿವೇಕಾನಂದ ವಿದ್ಯಾವರ್ಧಕ ಸಂಘದ ನೆಹರುನಗರದಲ್ಲಿರುವ ಕಾಲೇಜು ಆವರಣದಲ್ಲಿ ಜ.12 ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮ ಆಯೊಜಿಸಲಾಗಿದ್ದು, ಜ.13 ರಂದು ಶತ ಜಯಘೋಷ ಪಥ ಸಂಚಲನ ನಡೆಯಲಿದೆ.
ವಿವೇಕಾನಂದ ಜಯಂತಿ ಪ್ರಯುಕ್ತ 12 ರಂದು ಬೆಳಗ್ಗೆ 9:39ರಿಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರಸ ಸಂಸದ ತೇಜಸ್ವಿ ಸೂರ್ಯ ಅವರು ಆಗಮಿಸಲಿದ್ದಾರೆ.
Sullia : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ : ಖಂಡನೆ
ಬಿಲ್ಲವ ಸಮುದಾಯದ ಸಂದೇಶ್ ಎಂಬ ವ್ಯಕ್ತಿಯೊಬ್ಬ ಫೇಸ್ಬುಕ್ ನಲ್ಲಿ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ರ ಭಾವಚಿತ್ರ ಹಾಕಿ ಶ್ರದ್ಧಾಂಜಲಿ ಎಂದು ಹಾಕಿರುತ್ತಾರೆ. ಈ ವಿಷಯವಾಗಿ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಖಂಡನೆಯನ್ನು ವ್ಯಕ್ತಪಡಿಸುತ್ತಿರುವುದು ವರದಿಯಾಗಿದೆ.
Read MoreDL : ರಾಜ್ಯದಲ್ಲಿ 5947 ಡ್ರೈವಿಂಗ್ ಲೈಸೆನ್ಸ್ ರದ್ದು, ಇನ್ನೂ ಬಾಕಿ ಇವೆ ಪ್ರಕರಣಗಳು
ವಾಹನ ಚಾಲನೆ ಇಂದಿನ ಜೀವನದ ಅವಿಭಾಜ್ಯ ಭಾಗವಾಗಿದ್ದು, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಗಾಗಿ ಚಾಲನಾ ಪರವಾನಗಿ/ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿದೆ. ಚಾಲನಾ ಪರವಾನಗಿ ಎಂದರೆ ವ್ಯಕ್ತಿಯು ಸಾರ್ವಜನಿಕ ರಸ್ತೆಯಲ್ಲಿ ಕಾನೂನುಬದ್ಧವಾಗಿ ವಾಹನ ಚಲಾಯಿಸಲು ಅರ್ಹನಾಗಿದ್ದಾನೆ ಎಂಬುದಕ್ಕೆ ಸರ್ಕಾರ ನೀಡುವ ಅಧಿಕೃತ ದಾಖಲೆಯಾಗಿರುತ್ತದೆ.
Read Moreವಾಹನ ಕಳ್ಳತನದ ಕ್ಲೇಮ್ ಪಾವತಿಸಲು ವಿಮಾ ಕಂಪನಿಗೆ ಗ್ರಾಹಕ ನ್ಯಾಯಾಲಯ ಆದೇಶ
ವಾಹನ ಕಳ್ಳತನ ವಿಮಾ ಕ್ಲೇಮ್ ವಿವಾದದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಶ್ರೀರಾಮ್ ಜನರಲ್ ಇನ್ಶುರೆನ್ಸ್ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯವು ದಂಡ ವಿಧಿಸಿದೆ.
Read MoreDakshina Kannada : ಕರಾವಳಿಗರ ಹೆಮ್ಮೆಯ ಕಂಬಳಕ್ಕೆ ಅಧಿಕೃತ ಕ್ರೀಡಾ ಸ್ಥಾನಮಾನ
ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಗಳಿಗೆ ಮಹತ್ವದ ಉತ್ತೇಜನವಾಗಿ, ರಾಜ್ಯ ಸರ್ಕಾರ ಕಂಬಳಕ್ಕೆ ಅಧಿಕೃತ ಕ್ರೀಡಾ ಸ್ಥಾನಮಾನ ನೀಡಿದ್ದು, ಜೊತೆಗೆ ಹೈಕೋರ್ಟ್ ಮುಂದಿನ ಋತುವಿನಿಂದ ರಾಜ್ಯದಾದ್ಯಂತ ಕಂಬಳ ಆಯೋಜನೆಗೆ ಅನುಮತಿ ನೀಡಿದೆ. ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು, ಈ ನಿರ್ಧಾರಗಳು ಶತಮಾನಗಳ ಇತಿಹಾಸವಿರುವ ಗ್ರಾಮೀಣ ಕ್ರೀಡೆಗೆ ಮಹತ್ವದ ತಿರುವಾಗಿವೆ ಎಂದು ಹೇಳಿದರು.
Read MoreKollamogru : ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರ ವಿಲೀನಕ್ಕೆ ವಿರೋಧ
ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ವು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿದ್ದು, ಗ್ರಾಮೀಣ ಮತ್ತು ಕಡಿಮೆ ಜನರಿರುವ ಅರೆ ನಗರ ಪ್ರದೇಶಗಳ ಜನರಿಗೆ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದೆ. ಸಾಮಾನ್ಯವಾಗಿ 20,000–30,000 ಜನಸಂಖ್ಯೆಯನ್ನು ಒಳಗೊಂಡ ಪ್ರದೇಶಕ್ಕೆ ಒಂದು ಪಿಎಚ್ಸಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪಿಎಚ್ಸಿಗಳನ್ನು ಸ್ಥಾಪಿಸಲಾಗಿದೆ.
Read Moreಮೋಂತಿಮಾರು: ಜ. 11 ರಂದು ಅಯ್ಯಪ್ಪ ಭಕ್ತ ವೃಂದದ 45ನೇ ವಾರ್ಷಿಕೋತ್ಸವ, ಇರುಮುಡಿ ಕಟ್ಟುವ ಕಾರ್ಯಕ್ರಮ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರಿನ ಶಬರಿಗಿರಿಯಲ್ಲಿರುವ ಅಯ್ಯಪ್ಪ ಭಕ್ತ ವೃಂದದ 45ನೇ ವಾರ್ಷಿಕೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆ,ಅಯ್ಯಪ್ಪ ಮಾಲಾಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ಜ.11 ರಂದು ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ
Read MoreMangalore : ಎಸ್ಟಿ ಸಮುದಾಯಕ್ಕಾಗಿ ರಾಜ್ಯಮಟ್ಟದ ವೆಬ್ ಡೆವಲಪ್ಮೆಂಟ್ ಕೋರ್ಸ್ಗೆ ಆಗ್ನೆಸ್ ಕಾಲೇಜಿನಲ್ಲಿ ಚಾಲನೆ
ಮಂಗಳೂರು : ಮಂಗಳೂರು ಆಗ್ನೆಸ್ ಕಾಲೇಜು, ಎಸ್ಟಿ ಸಮುದಾಯದವರಿಗಾಗಿ ವಿಶೇಷವಾಗಿ ರೂಪುಗೊಳಿಸಿದ ಕೋಡಿಂಗ್ ಇಲ್ಲದ ವೆಬ್ಸೈಟ್ ಅಭಿವೃದ್ಧಿ ಕುರಿತ ರಾಜ್ಯಮಟ್ಟದ ಪ್ರಮಾಣಪತ್ರ ಕೋರ್ಸ್ಗೆ ಚಾಲನೆ ನೀಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವಿಭಾಗ ಹಾಗೂ ಐಕ್ಯೂಎಸಿ (IQAC) ಸಂಯುಕ್ತವಾಗಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಐಐಐಟಿ ಹೈದರಾಬಾದ್ನ iHub – Data ಪ್ರಾಯೋಜಕತ್ವ ವಹಿಸಿದೆ. ಡಿಜಿಟಲ್ ಸಾಕ್ಷರತೆ ಮತ್ತು ಕೌಶಲಾಭಿವೃದ್ಧಿಯ ಮೂಲಕ ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
Read MorePUC Exam: ಗಣಿತ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್!
ಇಂದಿನ ಪಿಯುಸಿ ಪ್ರಿಪರೆಟ್ರಿ ಗಣಿತ ಪರೀಕ್ಷೆಗೆ ನಿಗದಿಪಡಿಸಿದ್ದ ಪ್ರಶ್ನೆ ಪತ್ರಿಕೆ ಹಿಂದಿನ ದಿನವೇ ವಾಟ್ಸಾಪ್ ಮೂಲಕ ವ್ಯಾಪಕವಾಗಿ ಹರಡಿತ್ತು. ಆದರೂ, ಪೂರ್ವ ವಿಶ್ವವಿದ್ಯಾಲಯ ಪರೀಕ್ಷಾ ಮಂಡಳಿ (ಪಿಯು ಬೋರ್ಡ್) ಯಾವುದೇ ಬದಲಾವಣೆ ಮಾಡದೆ ಅದೇ ಪ್ರಶ್ನೆ ಪತ್ರಿಕೆಯನ್ನು ಬಳಸಿ ಪರೀಕ್ಷೆಯನ್ನು ನಡೆಸಿದೆ ಎಂಬ ಆರೋಪ ಕೇಳಿಬರುತ್ತಿದೆ.
Read MoreMangalore : ಮಾಫಿಯಾ ವಿರುದ್ಧ ಹೋರಾಡಿದ ನಿಷ್ಠಾವಂತ ಪೋಲಿಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಾ ?
ಕಳೆದ ಆರು ತಿಂಗಳಿಂದ ಶಾಂತಿಯುತ ಕಾನೂನು–ಸುವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದರೂ, ಬೆಟ್ಟಿಂಗ್, ಮಾಫಿಯಾ ಜಾಲಗಳು ಹಾಗೂ ಕೆಲ ರಾಜಕೀಯ ನಾಯಕರ ಒತ್ತಡದಿಂದ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ಅರುಣ್ ಅವರನ್ನು ವರ್ಗಾವಣೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
Read More
