ಮುಂಬೈನಲ್ಲಿ ಆಹಾರ ದುರಂತ: ನಾಲ್ವರು ಸಾವು, ಒಂಬತ್ತು ಮಂದಿ ಅಸ್ವಸ್ಥ! 

ಮುಂಬೈ : ಪೈಧೋಣಿ ಪ್ರದೇಶದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಆಹಾರ ವಿಷಬಾಧೆ ಶಂಕೆ ವ್ಯಕ್ತವಾಗಿದೆ. ಈ ಘಟನೆ ಭಾನುವಾರ ನಡೆದಿದ್ದು, ಪತಿ (40), ಪತ್ನಿ (35) ಹಾಗೂ ಅವರಿಬ್ಬರು ಪುತ್ರಿಯರು (16 ಮತ್ತು 13 ವರ್ಷ) ಮೃತರಾಗಿದ್ದಾರೆ.

ಶನಿವಾರ ರಾತ್ರಿ ಕುಟುಂಬದವರು ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ ಊಟ ಮಾಡಿಸಿದ್ದರು. ಸುಮಾರು 10.30 ಗಂಟೆಗೆ ಎಲ್ಲರೂ ಊಟ ಮುಗಿಸಿದ ಬಳಿಕ ಸಂಬಂಧಿಕರು ಮನೆಗೆ ಹಿಂತಿರುಗಿದ್ದರು. ನಂತರ ರಾತ್ರಿ 1ರಿಂದ 1.30ರ ನಡುವೆ ಕುಟುಂಬದ ನಾಲ್ವರು ತರಬೂಜ್ (ಕಲ್ಲಂಗಡಿ) ಸೇವಿಸಿದ್ದು, ಇದಾದ ಬಳಿಕ ಅವರ ಆರೋಗ್ಯ ಹದಗೆಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: ಮಹತ್ವದ ಹೇಳಿಕೆ ನೀಡಿದ ಎರಡನೇ ಆರೋಪಿ, “ಆತ ಮಾಡಿದ ತಪ್ಪಿಗೆ ನನಗೆ ಶಿಕ್ಷೆ” ಕಣ್ಣೀರು ಹಾಕಿದ ಆಟೋ ಚಾಲಕ

ಮುಂದಿನ ಬೆಳಿಗ್ಗೆ ಅವರಿಗೆ ವಾಂತಿ, ಜಜ್ಜು ಸೇರಿದಂತೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರೂ ಮೃತಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಪೊಲೀಸರು ಅಸಹಜ ಸಾವು (ADR) ಪ್ರಕರಣ ದಾಖಲಿಸಿದ್ದು, ಸೇವಿಸಿದ ಆಹಾರ ಮತ್ತು ಹಣ್ಣಿನ ಮಾದರಿಗಳನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣದ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಮತ್ತು ಪ್ರಯೋಗಾಲಯ ವರದಿಗಾಗಿ ಕಾಯಲಾಗುತ್ತಿದೆ. ಈ ಘಟನೆ ಆಹಾರ ಸುರಕ್ಷತೆ ಕುರಿತು ಗಂಭೀರ ಆತಂಕ ಹುಟ್ಟಿಸಿದ್ದು, ತನಿಖೆ ಮುಂದುವರಿದಿದೆ.

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು