ದ್ವಿತೀಯ ಪಿಯುಸಿ ಫಲಿತಾಂಶ : ರಾಜ್ಯದ ಟಾಪ್-10 ರ್ಯಾಂಕ್ ಗಳಲ್ಲಿ ಮೂಡುಬಿದಿರೆ‌ ಆಳ್ವಾಸ್ ಕಾಲೇಜಿನ 95 ವಿದ್ಯಾರ್ಥಿಗಳು

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2026ರಲ್ಲಿ ಅಸಾಧಾರಣ ಸಾಧನೆಗೈದು ತನ್ನ ಶೈಕ್ಷಣಿಕ ಮೇಲುಗೈಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಅನನ್ಯ ಕೆ, 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು, ದ್ವಿತೀಯ ಪಿಯು ಫಲಿತಾಂಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಾಧನೆ ಮೆರೆದಿದ್ದಳು.

Advertisement

ಇದನ್ನೂ ಓದಿ ಪಿಯುಸಿ ಫಲಿತಾಂಶ ಬೆನ್ನಲ್ಲೇ ಪರೀಕ್ಷೆ-2 ಡೇಟ್ ಫಿಕ್ಸ್

ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಮಂಜುನಾಥ್ ಎಸ್ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮೆರೆದಿದ್ದಾಳೆ.

Advertisement

ಈ ವರ್ಷದ ಫಲಿತಾಂಶದಲ್ಲಿ 95 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. 687 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ, 1557 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, 1892 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚು (ಡಿಸ್ಟಿಂಕ್ಷನ್) ಅಂಕಗಳನ್ನು ಗಳಿಸಿದ್ದಾರೆ. 285 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಲ್ಲವಿ ಕೆ. ಸಿ – 597, ಅಂಕಿತಾ ಬಸಪ್ಪ ಕೊನ್ನೂರ – 596, ದಿಶಾ ಎಚ್ ಶೆಟ್ಟಿ – 596, ಜ್ಞಾನಶ್ರೀ ಡಿ ಅರಳ – 596 ,ಆದರ್ಶ್ ಬಾಲಚಂದ್ರ ಹೆಗಡೆ – 596, ಲಿಜ್ವಿತಾ ವರ್ಜೀನಿಯಾ ಡಿ ಮೆಲ್ಲೋ – 596, ನೇಹಾ ಪಿ ಕಕರಡ್ಡಿ – 596, ಐಶ್ವರ್ಯ – 595, ಮಾನವಿ ಡಿ ಎಸ್ – 595, ನಿರಾಳಿ ಹೆಗ್ಗರ್ – 595, ಜಶ್ ಕಾವೇರಿಯಪ್ಪ ಎ. ಎಂ – 595, ವೈಷ್ಣವಿ ರಾವ್ – 595, ಅಕ್ಷಯಕುಮಾರ್ ಸೋಮಶೇಖರ ಗುಗ್ಗಾರಿ – 595 ಅಂಕವನ್ನು ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ.

Advertisement

ಗಣಿತ ವಿಷಯದಲ್ಲಿ 199, ಸಂಸ್ಕೃತ -122, ಬಿಸಿನೆಸ್ ಸ್ಟಡೀಸ್-86, ಕಂಪ್ಯೂಟರ್ ಸೈನ್ಸ್ -86, ಭೌತಶಾಸ್ತ್ರ-85, ಕನ್ನಡ-82, ಬೇಸಿಕ್ ಮ್ಯಾತ್ಸ್- 54, ಅಕೌಂಟೆನ್ಸಿ-53, ಜೀವಶಾಸ್ತ್ರ -49, ಸಂಖ್ಯಾಶಾಸ್ತ್ರ -45, ಅರ್ಥಶಾಸ್ತ್ರ-36, ರಸಾಯನಶಾಸ್ತ್ರ-21, ಹಿಂದಿ-13, ಎಲೆಕ್ಟಾçನಿಕ್ಸ್-6, ಇಂಗ್ಲೀಷ್-3, ಸಮಾಜಶಾಸ್ತ್ರ-2, ರಾಜ್ಯಶಾಸ್ತ್ರ-1, ಅರೇಬಿಕ್-1 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

6 ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳನ್ನು ಒಬ್ಬ ವಿದ್ಯಾರ್ಥಿ, 5 ವಿಷಯಗಳಲ್ಲಿ 4, 4 ವಿಷಯಗಳಲ್ಲಿ 20, 3 ವಿಷಯಗಳಲ್ಲಿ 66, 2 ವಿಷಯದಲ್ಲಿ 147, ಒಂದು ವಿಷಯದಲ್ಲಿ 481 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ. ಎಂ. ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿಎನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಕಲಾ ನಿಖಾಯದ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು