Breaking News

ಬಾಲ್ ಮಂದಿರ್ ಅನಾಥಾಶ್ರಮದಿಂದ 20 ಶಿಶುಗಳ ರಕ್ಷಣೆ: ಅಳುತ್ತಿದ್ದ ಕಂದಮ್ಮನಿಗೆ ಎದೆಹಾಲು ಉಣಿಸಿದ ಸಚಿವೆ

ಕಾಠ್ಮಂಡು: ನೆಪಾಳದ ‘ಬಾಲ್ ಮಂದಿರ್’ ಅನಾಥಾಶ್ರಮದಿಂದ ರಕ್ಷಿಸಲ್ಪಟ್ಟ 17 ದಿನಗಳ ಅನಾಥ ಮಗುವಿಗೆ ನೆಪಾಳದ ಮಹಿಳಾ, ಮಕ್ಕಳ ಮತ್ತು ಹಿರಿಯ ನಾಗರಿಕರ ಸಚಿವೆ ಸೀತಾ ಬಾದಿ (Sita Badi) ಅವರು ಸ್ತನ್ಯಪಾನ ಮಾಡಿಸಿ, ಆರೈಕೆ ಮಾಡಿದ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಕಾಠ್ಮಂಡುವಿನ ‘ನೆಪಾಳ ಮಕ್ಕಳ ಸಂಸ್ಥೆ’ (NCO) ನಡೆಸುತ್ತಿದ್ದ ಬಾಲ್ ಮಂದಿರ್ ಎಂಬ ಆಶ್ರಮದಲ್ಲಿದ್ದ 20ಕ್ಕೂ ಹೆಚ್ಚು ನವಜಾತ ಶಿಶುಗಳಿದ್ದ ಕೊಠಡಿಗೆ ಒಳಚರಂಡಿ நீர் (Sewage) ನುಗ್ಗಿ ದುರ್ನಾತ ಬೀರುತ್ತಿತ್ತು. ಅಲ್ಲದೆ ಹಲವು ಮಕ್ಕಳು ಕಣ್ಣಿನ ಸೋಂಕು, ಚರ್ಮರೋಗ ಹಾಗೂ ತೀವ್ರ ಕೆಮ್ಮಿನಿಂದ ಬಳಲುತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿನ ಆಧಾರದ ಮೇಲೆ ಸಚಿವೆ ಸೀತಾ ಬಾದಿ ಅವರು ಆಶ್ರಮಕ್ಕೆ ಯಾವುದೇ ಮುನ್ಸೂಚನೆ ನೀಡದೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಿತಿ ಗಂಭೀರವಾಗಿದ್ದನ್ನು ಕಂಡು ತಕ್ಷಣವೇ 15 ದಿನದಿಂದ 2 ವರ್ಷದೊಳಗಿನ 20 ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಆದೇಶಿಸಿದರು.

ಇದನ್ನೂ ಓದಿ: ಕಾಡಿನ ನಕ್ಸಲರು ಖಾಲಿಯಾಗಿದ್ದಾರೆ, ಈಗ ‘ದಿಮಾಗಿ ನಕ್ಸಲರ’ ವಿರುದ್ಧ ಹೋರಾಟ”: ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ 17 ದಿನದ ಹೆಣ್ಣು ಮಗುವೊಂದು ಹಸಿವಿನಿಂದ ನಿರಂತರವಾಗಿ ಅಳಲು ಪ್ರಾರಂಭಿಸಿತು. ಸ್ಥಳದಲ್ಲಿ ಯಾವುದೇ ಫಾರ್ಮುಲಾ ಹಾಲಿನ ವ್ಯವಸ್ಥೆ ಇಲ್ಲದ ಕಾರಣ, ತಾವೇ ಆ ಮಗುವನ್ನು ಎದೆಗೆ ಅಪ್ಪಿಕೊಂಡು ಸ್ತನ್ಯಪಾನ ಮಾಡಿಸಿದರು. “ನಾನೀಗ ಈ ಮಗುವಿನ ತಾಯಿ” ಎಂದು ಭಾವನಾತ್ಮಕವಾಗಿ ನುಡಿದರು.

ಸಚಿವೆ ಸೀತಾ ಬಾದಿ ಅವರು ತಮ್ಮ ಬಾಲ್ಯದ ಕೆಲ ದಿನಗಳನ್ನು ಮಕ್ಕಳ ಆರೈಕೆ ಕೇಂದ್ರದಲ್ಲೇ ಕಳೆದಿದ್ದರಿಂದ, ಅನಾಥ ಮಕ್ಕಳ ನೋವು ಅವರಿಗೆ ಹತ್ತಿರದಿಂದ ತಿಳಿದಿತ್ತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *