ಸುಳ್ಯದ ಗ್ರಾಮೀಣ ಜನತೆಗೆ ಶಾಸಕರಿಂದ ದೊಡ್ಡ ಗಿಫ್ಟ್! 1.35 ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿಪೂಜೆ!

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಹಾಗೂ ರಸ್ತೆಗಳ ಅಭಿವೃದ್ಧಿಗೆ ಶಾಸಕರು ವಿಶೇಷ ಆದ್ಯತೆ ನೀಡಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 1.35 ಕೋಟಿ (ಒಂದು ಕೋಟಿ ಮೂವತೈದು ಲಕ್ಷ) ರೂಪಾಯಿ ವೆಚ್ಚದ ವಿವಿಧ ರಸ್ತೆ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಇಂದು (ಮೇ 26) ಅಧಿಕೃತವಾಗಿ ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಮಡಪ್ಪಾಡಿ, ಹರಿಹರ, ಬಾಳುಗೋಡು, ಗುತ್ತಿಗಾರು ಹಾಗೂ ಉಬರಡ್ಕ ಮಿತ್ತೂರು ಗ್ರಾಮಗಳ ದೀರ್ಘಕಾಲದ ರಸ್ತೆ ಸಂಪರ್ಕದ ಬೇಡಿಕೆಗೆ ಈ ಮೂಲಕ ಚಾಲನೆ ಸಿಕ್ಕಂತಾಗಿದೆ.

ಮಂಜೂರಾದ ಪ್ರಮುಖ ಕಾಮಗಾರಿಗಳ ವಿವರ ಇಲ್ಲಿದೆ:

1. ಮಡಪ್ಪಾಡಿ ಗ್ರಾಮ (ಒಟ್ಟು 30 ಲಕ್ಷ ರೂ.):

ಮಡಪ್ಪಾಡಿ ನಡುಬೇಟ್ಟು ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

ಮಡಪ್ಪಾಡಿ ಶೀರಡ್ಕ ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

ಮಡಪ್ಪಾಡಿ ಜೇಡಿಗುಂಡಿ ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

2. ಹರಿಹರ ಗ್ರಾಮ (ಒಟ್ಟು 20 ಲಕ್ಷ ರೂ.):

ಹರಿಹರ ಅಜಂಣ ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

ಗುಂಡಿ ಹಿತ್ಲು ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

3. ಬಾಳುಗೋಡು ಗ್ರಾಮ (ಒಟ್ಟು 20 ಲಕ್ಷ ರೂ.):

ಬಾಳುಗೋಡು ಬೈಲು ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

ಶಿವಾಲ ಕುಡುಮುಂಡೂರು ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

4. ಗುತ್ತಿಗಾರು ಗ್ರಾಮ (ಒಟ್ಟು 30 ಲಕ್ಷ ರೂ.):

ಪೈಕ ಸೇತುವೆ ಬಳಿ ಸುರಕ್ಷತಾ ತಡೆಗೋಡೆ (Retaining Wall) ರಚನೆ – 10 ಲಕ್ಷ ರೂ.

ದೇವಸ್ಯ – ಕೆಂಬಾರು ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

ಕಡ್ತಲ್ ಕಜೆ – ಪೈಕ ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

5. ಉಬರಡ್ಕ ಮಿತ್ತೂರು ಗ್ರಾಮ (ಒಟ್ಟು 35 ಲಕ್ಷ ರೂ.):

ಉಬರಡ್ಕ – ಮಿತ್ತೂರು – ಕಲ್ಲುಪಣೆ ರಸ್ತೆ ಅಭಿವೃದ್ಧಿ – 15 ಲಕ್ಷ ರೂ.

ನರಸಿಂಹ ದೇವಸ್ಥಾನ – ಬೆಳರಂಪಾಡಿ ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

ಬಲ್ನಾಡು ರಸ್ತೆ ಅಭಿವೃದ್ಧಿ – 10 ಲಕ್ಷ ರೂ.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ: ಸುಳ್ಯ ಶಾಸಕರಿಂದ ಆತ್ಮೀಯ ಸ್ವಾಗತ; ರೈತರ ಜಾಗಗಳಿಗೆ ಸೋಲಾರ್ ಬೇಲಿ, ಹಕ್ಕುಪತ್ರ ಸೇರಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ!

ಈ  ಗುದ್ದಲಿಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಪ್ರಮುಖ ಮುಖಂಡರುಗಳಾದ ಹರೀಶ ಕಂಜಿಪಿಲಿ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ವೆಂಕಟ್ ದಂಬೆಕೋಡಿ, ಕೇಶವ ಭಟ್ ಮುಳಿಯ, ಕೃಷ್ಣಯ್ಯ ಮೂಲೆತೋಟ, ಕಿಶೋರ್ ಪೈಕ, ಮಾಯಿಲಪ್ಪ ಕೊಂಬೆಟ್ಟು, ಚಂದ್ರಹಾಸ ಶಿವಾಲ, ವಿಜಯ್ ಅಜಂಣ, ಸೋಮಶೇಖರ್ ಕಟ್ಟೆಮನೆ, ಮಾಧವ ಚಾಂತಾಲ, ರಾಕೇಶ್ ಮೆಟ್ಟಿನಡ್ಕ, ಹಿಮ್ಮತ್, ವಿನಯ್ ಮುಳುಗಾಡು, ಸಂದೀಪ್ ಉಬರಡ್ಕ, ಶಾರದ ಎಸ್. ರೈ, ಶಿವರಾಮ ಕಲ್ಪತರು, ವಿಜಯ ಉಬರಡ್ಕ ಸೇರಿದಂತೆ ಹಲವಾರು ಪಕ್ಷದ ಕಾರ್ಯಕರ್ತರು ಹಾಗೂ ಆಯಾ ರಸ್ತೆಗಳ ನೂರಾರು ಫಲಾನುಭವಿ ಗ್ರಾಮೀಣ ಸಾರ್ವಜನಿಕರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು