ಪಾದಚಾರಿ ಮಾರ್ಗ ಅತಿಕ್ರಮಣಕಾರರ ವಿರುದ್ಧ ಕ್ರಮಕ್ಕೆ ಸೂಚನೆ, ಬೀಳಲಿದೆ ದಂಡ, ನಡೆಯಲಿದೆ ತೆರವು ಕಾರ್ಯಾಚರಣೆ

ಬೆಂಗಳೂರು: ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿದವರ ವಿರುದ್ಧ ಕಟ್ಟುನಿಟ್ಟಿನ‌ ಕ್ರಮ ಕೈಗೊಳ್ಳುವಂತೆ ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅತಿಕ್ರಮಣಕಾರರ ಮೇಲೆ ದಂಡ ವಿಧಿಸಿ, ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವುದರ ಜೊತೆಗೆ ಸುಗಮ ಹಾಗೂ ಸುಲಭ ಸಂಚಾರಕ್ಕೆ ಅನುಕೂಲವಾಗುವ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಅವರು ನಿರ್ದೇಶಿಸಿದ್ದಾರೆ.

ಶನಿವಾರ ಹಳೆ ಮದ್ರಾಸ್ ರೋಡಿನಲ್ಲಿ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ನಿಂದ ಉಲ್ಸೂರ್ ಕೆರೆವರೆಗೆ ನಡೆದ ಪರಿಶೀಲನಾ ಭೇಟಿಯ ವೇಳೆ ಅವರು ಈ ಸೂಚನೆಗಳನ್ನು ನೀಡಿದರು. ಈ ಪ್ರದೇಶ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಗೆ ಸೇರಿದೆ.

Advertisement

ಪಾದಚಾರಿ ಮಾರ್ಗಗಳಲ್ಲಿ ವ್ಯಾಪಕ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಲು ವಿಶೇಷ ತಂಡಗಳನ್ನು ನಿಯೋಜಿಸಲು ಸೂಚಿಸಲಾಗಿದ್ದು, ಹಾನಿಗೊಳಗಾದ ಕಲ್ಲು ಫಲಕಗಳು ಹಾಗೂ ಅಂಚು ಕಲ್ಲುಗಳನ್ನು ತಕ್ಷಣ ದುರಸ್ತಿ ಮಾಡಿ ಪಾದಚಾರಿಗಳ ಸಂಚಾರ ಸುಗಮಗೊಳಿಸಲು ಆದೇಶಿಸಲಾಗಿದೆ.

ಇದನ್ನೂ ಓದಿವಯಸ್ಸೇ ಅಡ್ಡಿಯಲ್ಲ: 96ರಲ್ಲಿ ಪರೀಕ್ಷೆ ಬರೆದು ಸಾಧನೆ ಮಾಡಿದ ಕರ್ಥ್ಯಾಯಿನಿ ಅಮ್ಮ

Advertisement

ಪರಿಶೀಲನೆ ವೇಳೆ, ಹಳೆ ಮದ್ರಾಸ್ ರೋಡಿನಲ್ಲಿರುವ ಎಂಇಜಿ ಶಿಬಿರದ ಗೋಡೆಯ ಹಾನಿಗೊಳಗಾದ ಭಾಗದ ಬಳಿ ಕಸದ ತ್ಯಾಜ್ಯ ಹಾಕಲಾಗುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೆ, ಆಂಜನೇಯ ದೇವಸ್ಥಾನದ ಸಮೀಪದಲ್ಲಿನ ಪಾದಚಾರಿ ಮಾರ್ಗಗಳನ್ನು ಸಸಿ ತೋಟ, ಕಲ್ಲು ಅಂಗಡಿ ಹಾಗೂ ಮೂರ್ಫಿ ರಸ್ತೆ ಭಾಗದಲ್ಲಿ ಅತಿಕ್ರಮಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು, ಉಲ್ಸೂರ್ ಕೆರೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಹಿತಿ ಫಲಕಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

Advertisement

106 ಎಕ್ರೆ ವ್ಯಾಪ್ತಿಯಲ್ಲಿರುವ ಉಲ್ಸೂರ್ ಕೆರೆಯನ್ನು ರೂ. 33.50 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮಳೆಗಾಲದೊಳಗೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಕಾರ್ಯನಿರ್ವಾಹಕ ಅಭಿಯಂತರ ಮಾಹಿತಿ ನೀಡಿದರು. ಜೊತೆಗೆ, ಉದ್ಯಾನವನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾರ್ಯವೂ ಅಂತಿಮ ಹಂತದಲ್ಲಿದೆ ಎಂದು ತಿಳಿಸಲಾಗಿದೆ. ಹಿನ್ನೆಲೆ, ಹೋಟೆಲ್‌ ಉದ್ಯಮಿಗಳು ಹೆಚ್ಚಿನ ದರಕ್ಕೂ ಕಪ್ಪು ಮಾರುಕಟ್ಟೆಯಲ್ಲಿ ಸಿಲಿಂಡರ್‌ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ, ಅವರು ಅನಿಲ ಏಜೆನ್ಸಿಗಳ ಎದುರು ಪ್ರತಿಭಟನೆಗಳನ್ನು ಕೂಡ ನಡೆಸಿದ್ದಾರೆ.

ಗ್ರಾಹಕರು ಬೆಲೆಪಟ್ಟಿಗಳನ್ನು ಪ್ರದರ್ಶಿಸುವಂತೆ ಹೋಟೆಲ್‌ಗಳಿಗೆ ಒತ್ತಾಯಿಸಿದ್ದರೂ, ಅನೇಕ ಪ್ರಮುಖ ಹೋಟೆಲ್‌ಗಳು ಇದನ್ನು ಪಾಲಿಸುತ್ತಿಲ್ಲ. ಎಲ್‌ಪಿಜಿ ಕೊರತೆಯ ನೆಪದಲ್ಲಿ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ನೀಡಿರುವ ಸೂಚನೆಗಳನ್ನೂ ಹಲವರು ಕಡೆಗಣಿಸುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಬೆಂಗಳೂರು ನಗರದ ಮತ್ತಷ್ಟು ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು