ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಥೀಲಗೊಂಡಿರುವ ಸೇತುವೆಗಳ ಪುನಶ್ಚೇತನ ಹಾಗೂ ಹೊಸ ಸೇತುವೆಗಳ ನಿರ್ಮಾಣಕ್ಕಾಗಿ ಸರ್ಕಾರವು 5 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದೆ. ಮಾನ್ಯ ಶಾಸಕರ ಶಿಫಾರಸ್ಸಿನ ಮೇರೆಗೆ ಸುಳ್ಯ ಮತ್ತು ಕಡಬ ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿನ ಸೇತುವೆ ಕಾಮಗಾರಿಗಳಿಗೆ ಈ ಹಣ ವಿನಿಯೋಗವಾಗಲಿದೆ.
ಕಾಮಗಾರಿಗಳ ವಿವರ ಹೀಗಿದೆ:

- ಪದಕ (ಹರಿಹರ-ಪಲ್ಲತಡ್ಕ ರಸ್ತೆ): ನಡುಗಲ್ಲು-ಹರಿಹರ ಮಾರ್ಗದ ಪದಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 1.75 ಕೋಟಿ ರೂ ಮೀಸಲಿಡಲಾಗಿದೆ.
- ಮೆಟ್ಟಿನಡ್ಕ (ಮಡಪ್ಪಾಡಿ ಗ್ರಾಮ): ಮಡಪ್ಪಾಡಿ-ಗುತ್ತಿಗಾರು ರಸ್ತೆಯ ಮೆಟ್ಟಿನಡ್ಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕಾಗಿ 1.50 ಕೋಟಿ ರೂ ಬಿಡುಗಡೆಯಾಗಿದೆ.
- ತೋಟಂಪಾಡಿ (ಮಂಡೆಕೋಲು ಗ್ರಾಮ): ಮಂಡೆಕೋಲು-ಕನ್ಯಾನ ರಸ್ತೆಯ ತೋಟಂಪಾಡಿ ಸೇತುವೆಗಾಗಿ 60 ಲಕ್ಷ ರೂ ಅನುದಾನ ನೀಡಲಾಗಿದೆ.
- ಡೆಕ್ಕಳ (ಪುಳಿಕುಕ್ಕು-ಎಡಮಂಗಲ ರಸ್ತೆ): ಹಾನಿಗೊಳಗಾದ ಕಿರಿದಾದ ಸೇತುವೆಯ ಬದಲಿಗೆ ಹೊಸ ಕಿರು ಸೇತುವೆ ನಿರ್ಮಾಣಕ್ಕೆ 25 ಲಕ್ಷ ರೂ ವಿನಿಯೋಗಿಸಲಾಗುವುದು.
- ಪೈಚಾರು-ಸುಬ್ರಹ್ಮಣ್ಯ ರಸ್ತೆ: ಈ ಮಾರ್ಗದಲ್ಲಿ ಹಾನಿಗೊಳಗಾದ ಸೇತುವೆಯ ಬದಲಿಗೆ ಹೊಸ ಸೇತುವೆ ನಿರ್ಮಾಣಕ್ಕಾಗಿ 90 ಲಕ್ಷ ರೂ ಮಂಜೂರಾಗಿದೆ.
ಇದನ್ನೂ ಓದಿ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭ
ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಸುಗಮವಾಗಲಿದ್ದು, ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಂಚಾರದ ಅಡೆತಡೆಗಳಿಗೆ ಮುಕ್ತಿ ಸಿಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

