ಅಡ್ಡಬಂದ ನಾಯಿ, ಬೈಕ್‌ ಸ್ಕಿಡ್‌; ಗಲಾಟೆಗೆ ತಿರುಗಿದ ಪ್ರಕರಣ, ಚೈನ್‌ ಕಳವು ಆರೋಪ

udupi-bike-accident-clash-chain-snatching-case-counter-case

ಉಡುಪಿ: ರಾತ್ರಿ ವೇಳೆ ಸಂಭವಿಸಿದ ಬೈಕ್ ಅಪಘಾತವು ಗಲಾಟೆಗೆ ತಿರುಗಿ, ಹಲ್ಲೆ ಮತ್ತು ಚಿನ್ನದ ಸರ ಕಳವು ಆರೋಪಗಳೊಂದಿಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹಾಗೂ ಪ್ರತಿಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.

ದೂರಿನ ಪ್ರಕಾರ, ಮೇ 2ರಂದು ಬಡಗಬೆಟ್ಟು ನಿವಾಸಿ ಎಸ್. ವೈಭವ್ ಬಿ. ನಾಯಕ್ ತಮ್ಮ ಸ್ನೇಹಿತರಾದ ಶಶ್ವತ್ ಶೆಟ್ಟಿ, ಅಭಯ್ ಸ್ಯಾಮುವೆಲ್, ಯಶಸ್ ಮತ್ತು ಆದಿತ್ಯ ಭಟ್ ಜೊತೆ ಮನೆಯಲ್ಲಿ ಇದ್ದರು. ರಾತ್ರಿ ಊಟದ ಬಳಿಕ ಸುಮಾರು ಮಧ್ಯರಾತ್ರಿ ವೇಳೆಗೆ ಅಭಯ್ ಮತ್ತು ಶಶ್ವತ್ ಬೈಕ್‌ನಲ್ಲಿ ಹೊರಟಿದ್ದರು.

Advertisement

ಬಬ್ಬುಸ್ವಾಮಿ ದೇವಸ್ಥಾನದ ಸಮೀಪದಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಇಬ್ಬರೂ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಸ್ಥಳೀಯರು ಸೇರಿಕೊಂಡು ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಅಭಯ್, ವೈಭವ್‌ಗೆ ಕರೆ ಮಾಡಿ ತಿಳಿಸಿದ ಹಿನ್ನೆಲೆಯಲ್ಲಿ, ವೈಭವ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾರಿನಲ್ಲಿ ಸ್ಥಳಕ್ಕೆ ತೆರಳಿದರು.

Advertisement

ಇದನ್ನೂ ಓದಿ: ಬಂಟ್ವಾಳ: ಡ್ರಗ್ಸ್‌ ಸಾಗಿಸುತ್ತಿದ್ದ ಬೋಳಂತೂರಿನ ಆರೋಪಿಗಳು ಮಂಚಿಯಲ್ಲಿ ಅರೆಸ್ಟ್

ಅಲ್ಲಿ ತೀವ್ರ ವಾಗ್ವಾದ ಉಂಟಾಗಿ, ಸ್ಥಳದಲ್ಲಿದ್ದ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಶೇಖರ್ ಎಂಬ ವ್ಯಕ್ತಿ ವೈಭವ್‌ಗೆ ಥಳಿಸಿದ್ದಾನೆ ಎಂಬ ಆರೋಪವೂ ಇದೆ. ನಂತರ ಹಲವರು ಸೇರಿಕೊಂಡು ಕಟ್ಟಿಗೆಗಳಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಗಲಾಟೆಯ ವೇಳೆ ವೈಭವ್ ಧರಿಸಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದಕ್ಕೆ ಪ್ರತಿಯಾಗಿ ನೀಡಿದ ದೂರಿನಲ್ಲಿ, ಶೇಖರ್ ಅವರು ತಮ್ಮ ಮನೆಯಲ್ಲಿ ಕುಳಿತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಬಿದ್ದಿದ್ದಾರೆ. ಅವರಿಗೆ ಸಹಾಯ ಮಾಡಲು ಹೋದಾಗ, ಅವರು ಪ್ರಶ್ನಿಸಿ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ.

ಅವರು ಮತ್ತಷ್ಟು ಆರೋಪಿಸಿದ್ದು, ಬೈಕ್ ಸವಾರರು ತಮ್ಮ ಸ್ನೇಹಿತರನ್ನು ಕರೆಸಿಕೊಂಡು, ತಮ್ಮ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಟ್ಟಿಗೆಗಳಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದಾರೆ. ಬಳಿಕ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ ಎಂದಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮತ್ತು ಪ್ರತಿಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು