ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಇಂದು (ಮೇ 1, 2026) ಜೈನ ಮುನಿಗಳ ಪಾದಯಾತ್ರೆಯ ವೇಳೆ ಕಾಡಾನೆಗಳ ಹಿಂಡು ಎದುರಾದ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಸಮಯೋಚಿತ ಭದ್ರತೆಯಿಂದಾಗಿ ಮುನಿಗಳು ಸುರಕ್ಷಿತವಾಗಿ ಪಾದಯಾತ್ರೆ ಮುಂದುವರಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚೀಕನಹಳ್ಳಿ, ನೇರಳಕಟ್ಟೆ ಮತ್ತು ಕಿತ್ತಾವರ ಮಾರ್ಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ನಾಲ್ವರು ಜೈನ ಮುನಿಗಳು ಅರೆಹಳ್ಳಿಯ ವಾಟಿಹಳ್ಳಿಗೆ ಪಾದಯಾತ್ರೆ ಕೈಗೊಂಡಿದ್ದಾಗ ರಸ್ತೆಯಲ್ಲಿ ಕಾಡಾನೆಗಳ ಹಿಂಡು ಅಡ್ಡ ಬಂದಿದೆ. ಮುನಿಗಳ ಪಾದಯಾತ್ರೆಯ ಬಗ್ಗೆ ಮೊದಲೇ ಮಾಹಿತಿ ಇದ್ದ ಕಾರಣ, ಅರಣ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿ ‘ಎಸ್ಕಾರ್ಟ್’ (Escort) ಭದ್ರತೆ ನೀಡಿದ್ದರು.

ಇದನ್ನೂ ಓದಿ: ಕರಾವಳಿಯಲ್ಲಿ ಹೀಟ್ ಅಲರ್ಟ್: ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಚರ್ಮದ ಸಮಸ್ಯೆ; ಆಸ್ಪತ್ರೆಗಳಲ್ಲಿ ವಿಶೇಷ ಬೆಡ್ ಮೀಸಲು!
ಆನೆಗಳು ರಸ್ತೆ ದಾಟುವವರೆಗೆ ಮುನಿಗಳನ್ನು ಸುರಕ್ಷಿತವಾಗಿ ನಿಲ್ಲಿಸಿ, ನಂತರ ಭದ್ರತೆಯೊಂದಿಗೆ ಅವರನ್ನು ನಿಗದಿತ ಸ್ಥಳಕ್ಕೆ ತಲುಪಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

