Breaking News

10 ಪುತ್ರಿಯರ ನಂತರ 11ನೇ ಸಂತಾನವಾಗಿ ಪುತ್ರ ಪ್ರಾಪ್ತಿ! ದೇವರ ಇಚ್ಛೆ ಎಂದ ತಂದೆ

Woman gives birth to a son after 10 daughters in Haryana

ಜಿಂದ್ (ಹರಿಯಾಣ): ಇಲ್ಲಿನ ಮಹಿಳೆಯೊಬ್ಬರು 10 ಪುತ್ರಿಯರನ್ನು ಹೆತ್ತು ಇದೀಗ 11ನೇ ಸಂತಾನವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ 11 ಮಕ್ಕಳ ತಂದೆ, ಎಲ್ಲವೂ ದೇವರ ಇಚ್ಛೆ ಎಂದಿದ್ದಾರೆ.

ಈ ವಾರದ ಆರಂಭದಲ್ಲಿ ಜಿಂದ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ನಡೆದಿದ್ದು, ಭಾರತದ ಹಲವು ಭಾಗಗಳಲ್ಲಿ ತಾಯಿಯ ಆರೋಗ್ಯ ಮತ್ತು ಗಂಡು ಮಗುವಿನ ಮೇಲಿನ ಸಾಮಾಜಿಕ ಒತ್ತಡದ ಬಗ್ಗೆ ಕಳವಳವನ್ನು ಮತ್ತೆ ಹುಟ್ಟುಹಾಕಿದೆ. ಹೆರಿಗೆಯನ್ನು ಹೆಚ್ಚಿನ ಅಪಾಯವೆಂದು ಪರಿಗಣಿಸಲಾಗಿದ್ದರೂ, ತಾಯಿ ಮತ್ತು ನವಜಾತ ಶಿಶು ಇಬ್ಬರೂ ಸುರಕ್ಷಿತವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Advertisement

37 ವರ್ಷದ ಮಹಿಳೆಯನ್ನು ಜನವರಿ 3 ರಂದು ಉಚಾನಾದ ಓಜಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಅವರು ಮಗುವಿಗೆ ಜನ್ಮ ನೀಡಿದರು. ಬಳಿಕದ 24 ಗಂಟೆಗಳಲ್ಲಿ ಮಹಿಳೆಯನ್ನು ಡಿಸ್ಚಾರ್ಜ್‌ ಮಾಡಿ ಮನೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: JNUನಲ್ಲಿ ಹುಟ್ಟಿದ ಶರ್ಜೀಲ್ ಇಮಾಮ್ ಸಂತತಿ ಉದ್ದೇಶ ನುಚ್ಚುನೂರು ಮಾಡಲಾಗುತ್ತೆ : ದೇವೇಂದ್ರ ಫಡ್ನವಿಸ್

“ಇದು ಹೆಚ್ಚಿನ ಅಪಾಯದ ಹೆರಿಗೆಯಾಗಿತ್ತು ಆದರೆ ತಾಯಿ ಮತ್ತು ಮಗು ಇಬ್ಬರೂ ಕ್ಷೇಮವಾಗಿದ್ದಾರೆ” ಎಂದು ವೈದ್ಯ ಡಾ. ನರವೀರ್ ಶಿಯೋರನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಈ ಪ್ರಕ್ರಿಯೆಯ ಸಮಯದಲ್ಲಿ ಮೂರು ಯೂನಿಟ್ ರಕ್ತದ ಅಗತ್ಯವಿತ್ತು. ಅಂತಿಮವಾಗಿ ಸಾಮಾನ್ಯ ಹೆರಿಗೆಯಾಯಿತು ಎಂದು ಹೇಳಿದರು.

ಮಗನ ಜನನ ಬಹುನಿರೀಕ್ಷಿತವಾಗಿತ್ತು ಎಂದು ತಂದೆ ಹೇಳಿದ್ದಾರೆ.

ಪಿಟಿಐ ಜೊತೆ ಮಾತನಾಡಿದ 11 ಮಕ್ಕಳ ತಂದೆ ಸಂಜಯ್ ಕುಮಾರ್, “ನನಗೆ 10 ಹೆಣ್ಣು ಮಕ್ಕಳಿದ್ದಾರೆ. ಇದೀಗ 11 ನೇ ಮಗುವಾಗಿ ಗಂಡು ಮಗುವನ್ನು ಪಡೆದಿದ್ದೇವೆ. ನಾವು ಒಬ್ಬ ಮಗನನ್ನು ಹೊಂದಬೇಕೆಂದು ಬಯಸಿದ್ದೆವು ಮತ್ತು ನನ್ನ ಹೆಣ್ಣುಮಕ್ಕಳು ಸಹ ಸಹೋದರನನ್ನು ಹೊಂದಲು ಬಯಸಿದ್ದರು” ಎಂದು ಹೇಳಿದರು. ಕೂಲಿ ಕಾರ್ಮಿಕರಾಗಿರುವ ಸಂಜಯ್‌, ಅವರ ಸೀಮಿತ ಆದಾಯದ ಹೊರತಾಗಿಯೂ, ತಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತೇನೆ ಎಂದಿದ್ದಾರೆ. ಮಕ್ಕಳಲ್ಲಿ ಹಿರಿಯ ಮಗಳು ದ್ವಿತೀಯ ಪಿಯುಸಿ ವ್ಯಾಸಾಂಗ ನಡೆಸುತ್ತಿದ್ದಾಳೆ.

ಇದನ್ನೂ ಓದಿ: ಮಹಾರಾಷ್ಟ್ರ: ಡೊಂಬಿವಿಲಿಯಲ್ಲಿ ಆರ್‌ಎಸ್‌ಬಿ-ಬಿಜಿಎಸ್‌ಬಿ ಸಪ್ತಪದಿ ವಧು-ವರ ಮೇಳ

ಪುರುಷ ಪ್ರಧಾನ, ಪಕ್ಷಪಾತದ ಕುರಿತಾದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ಅದು ಹಾಗಲ್ಲ” ಎಂದು ಹೇಳಿ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಿದ್ದಾರೆ ಮತ್ತು ದೇಶವೇ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ ಎಂದರು.

ಈ ಘಟನೆಯು ಹರಿಯಾಣದ ದೀರ್ಘಕಾಲದ ಲಿಂಗ ಅನುಪಾತದ ವಿರುದ್ಧದ ಹೋರಾಟದತ್ತ ಗಮನ ಸೆಳೆದಿದೆ. 2025 ರಲ್ಲಿ ರಾಜ್ಯವು 1,000 ಪುರುಷರಿಗೆ 923 ಮಹಿಳೆಯರ ಅನುಪಾತವನ್ನು ದಾಖಲಿಸಿದೆ. ಇದು ಹಿಂದಿನ ವರ್ಷಕ್ಕಿಂತ ಸುಧಾರಣೆಯಾಗಿದೆ. ಈ ರೀತಿಯ ಪ್ರಕರಣಗಳು ಜಾಗೃತಿ ಅಭಿಯಾನಗಳ ಹೊರತಾಗಿಯೂ ಬದಲಾಗದೆ ಉಳಿದಿರುವ ಆಳವಾಗಿ ಬೇರೂರಿರುವ ಸಾಮಾಜಿಕ ಮನೋಭಾವಗಳನ್ನು ಎತ್ತಿ ತೋರಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು