Ticket Rate : ಮಂಗಳೂರು-ಕಾಸರಗೋಡು ಬಸ್ ಟಿಕೆಟ್ ದರ ಹೆಚ್ಚಳ !

ಮಂಗಳೂರು–ಕಾಸರಗೋಡು ಮಾರ್ಗದ ಕುಂಬಳ ಟೋಲ್ ಗೇಟ್‌ನಲ್ಲಿ ಅಧಿಕೃತವಾಗಿ ಟೋಲ್ ಸಂಗ್ರಹ ಆರಂಭವಾಗುವ ಮೊದಲೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಬಸ್‌ಗಳ ಟಿಕೆಟ್ ದರವನ್ನು ಹೆಚ್ಚಿಸಿದೆ. ಮಂಗಳವಾರ ಬೆಳಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟೋಲ್ ಶುಲ್ಕವನ್ನು ಸೇರಿಸಿ ಪರಿಷ್ಕೃತ ದರ ವಸೂಲಿ ಮಾಡಲಾಗುತ್ತಿದೆ. ಆದರೆ ಇದೇ ಮಾರ್ಗದಲ್ಲಿ ಸಂಚರಿಸುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ–ಕೇರಳ) ಬಸ್‌ಗಳಲ್ಲಿ ಇದುವರೆಗೆ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಈ ಹಿಂದೆ ಕುಂಭಳದಿಂದ ಮಂಗಳೂರುವರೆಗೆ ಟಿಕೆಟ್ ದರ ₹67 ಆಗಿದ್ದರೆ, ಇದೀಗ ಅದನ್ನು ₹75ಕ್ಕೆ ಹೆಚ್ಚಿಸಲಾಗಿದೆ. ರಾಜಹಂಸ ಸೇವೆಗಳ ಟಿಕೆಟ್ ದರವನ್ನು ₹80ರಿಂದ ₹90ಕ್ಕೆ ಹೆಚ್ಚಿಸಲಾಗಿದೆ.

Read More

Belthangady : ಸುಮಂತ್ ಸಾವು ಪ್ರಕರಣ: ಕುಟುಂಬಸ್ಥರ ನೆರವಿಗೆ ದಾವಿಸಿದ ಮೋಂತಿಮಾರು ಆರ್.ಎಸ್.ಬಿ. ಸಂಘ

ದೇವಸ್ಥಾನಕ್ಕೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15)ನ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಿ, ಇದು ಕೊಲೆ ಎಂದು ಸಾಬೀತಾದ ಬಳಿಕ ಪ್ರಕರಣದ ಬಗ್ಗೆ ತೀವ್ರ ಶೋಧ ನಡೆಯುತ್ತಿದೆ.

Read More

Puttur : ಪ್ರಚೋದನಕಾರಿ ಭಾಷಣ: ಮತ್ತೆ‌‌ ಪ್ರಭಾಕರ್ ಭಟ್ ವಿರುದ್ಧ FIR

ಪ್ರಚೋದನಾಕಾರಿ ಭಾಷಣ ಆರೋಪದಡಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಮೇಲೆ ಪುತ್ತೂರಿನಲ್ಲಿ ಕೇಸ್ ದಾಖಲಾಗಿರುವುದು ವರದಿಯಾಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು