ವೈರಲ್ & ಟ್ರೆಂಡಿಂಗ್
Rampur : ಗಂಡನನ್ನೇ ಇಬ್ಬರು ಪತ್ನಿಯರಿಗೆ ಹಂಚಿ ತೀರ್ಪು ನೀಡಿದ ಪಂಚಾಯತ್
ಚಿತ್ರಕಥೆಯಲ್ಲಿನ ಘಟನೆಯಂತೆ ಕಾಣುವ ಅಚ್ಚರಿಯ ತೀರ್ಪೊಂದನ್ನು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಗ್ರಾಮ ಪಂಚಾಯತ್ ನೀಡಿದೆ. ಜಮೀನು ಅಥವಾ ಆಸ್ತಿ ಹಂಚುವ ಬದಲು, ಈ ಬಾರಿ ಪಂಚಾಯತ್ ಜೀವಂತ ವ್ಯಕ್ತಿಯಾದ ಗಂಡನನ್ನೇ ಹಂಚಿದೆ.
Read MoreViral Video : 70 ವರ್ಷದ ವೃದ್ಧನ ಮೊದಲ ರೀಲ್ಗೆ 2 ಕೋಟಿ ವೀಕ್ಷಣೆ! ವಿಡಿಯೋ ಇಲ್ಲಿದೆ
ವಯಸ್ಸಿಗೆ ಯಾವುದೂ ಅಡ್ಡಿ ಬರೋದಿಲ್ಲ ಎಂಬುದನ್ನು ಸಾಬೀತುಪಡಿಸುತ್ತಾ, ಉತ್ತರ ಪ್ರದೇಶದ 70 ವರ್ಷದ ವಿನೋದ್ ಕುಮಾರ್ ಶರ್ಮಾ ಅವರು ತಮ್ಮ ಮೊದಲ ವ್ಲಾಗ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಹಿಂದಿನಿಂದ ಮಾಡಿಕೊಂಡು ಬಂದಿರುವ ವ್ಲಾಗ್ ನ ಅನುಭವವಿಲ್ಲದೆ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ ಅವರ ಮೊದಲ ವೀಡಿಯೊ 72 ಗಂಟೆಗಳಲ್ಲಿ ಸುಮಾರು 2.9 ಕೋಟಿ ಬಾರಿ ವೀಕ್ಷಣೆಯಾಗಿದೆ.
Read Moreದೇಶದ ಸುರಕ್ಷಿತ ನಗರಗಳಲ್ಲಿ ಮಂಗಳೂರು ಪ್ರಥಮ, ನಂಬಿಯೋ ವರದಿ
ಮಂಗಳೂರು: ಇತ್ತೀಚೆಗೆ ಬಿಡುಗಡೆಯಾದ ನಂಬಿಯೊ ಸುರಕ್ಷತಾ ಸೂಚ್ಯಂಕ 2026 ರಲ್ಲಿ ಮಂಗಳೂರು ಭಾರತದ ಅತ್ಯಂತ ಸುರಕ್ಷಿತ ನಗರವೆಂದು ಹೆಸರಿಸಲ್ಪಟ್ಟಿದೆ, ವಿಶ್ವದಾದ್ಯಂತ ಮೌಲ್ಯಮಾಪನ ಮಾಡಲಾದ 304 ನಗರಗಳಲ್ಲಿ 74.4 ಸುರಕ್ಷತಾ ಅಂಕಗಳೊಂದಿಗೆ ಜಾಗತಿಕವಾಗಿ 46 ನೇ ಸ್ಥಾನದಲ್ಲಿದೆ. ಜನವರಿ 2026 ರಲ್ಲಿ ಬಿಡುಗಡೆಯಾದ ಸಮೀಕ್ಷೆ ಆಧಾರಿತ ಸೂಚ್ಯಂಕದ ಪ್ರಕಾರ, ಚೀನಾದ ಕ್ವಿಂಗ್ಡಾವೊ 89.2 ಸುರಕ್ಷತಾ ಅಂಕಗಳೊಂದಿಗೆ ಜಾಗತಿಕವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
Read MoreBreaking: ಸಾಲು ಸಾಲು ರಜೆ ಹಿನ್ನಲೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಂ
ಬೆಂಗಳೂರು: ಇಂದಿನಿಂದ ಸಾಲು ಸಾಲು ರಜೆಗಳ ಹಿನ್ನಲೆ ಸಂಚಾರ ದಟ್ಟಣೆಗೆ ಹೆಚ್ಚಳವಾಗಿದೆ. ನಾಲ್ಕು ದಿನಗಳ ಸುದೀರ್ಘ ರಜೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದು, ನಗರದ ಹೃದಯಭಾಗವಾದ ಮೆಜೆಸ್ಟಿಕ್ ನಲ್ಲಿ ಜನವೋ ಜನ. ತಮ್ಮ ಊರಿನತ್ತ ಪ್ರಯಾಣ ಬೆಳೆಸುತ್ತಿರುವ ಪ್ರಯಾಣಿಕರನ್ನು ಕಾಣಬಹುದು.
Read Moreಹುಬ್ಬಳ್ಳಿ: ಬೆಂಕಿಗಾಹುತಿಯಾದ ಮೆಟ್ರೋ ಕಾಂಪ್ಲೆಕ್ಸ್
ಹುಬ್ಬಳ್ಳಿ: ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಕಾಂಪ್ಲೆಕ್ಸ್ ವೊಂದು ಹೊತ್ತಿ ಉರಿದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ತಡರಾತ್ರಿ ನಡೆದಿದೆ.
Read MoreShocking: ವಿದ್ಯಾರ್ಥಿಗಳ ಆತ್ಮಹತ್ಯೆ, ಕಾನ್ಪುರ ಐಐಟಿ ಪ್ರಥಮ
ಮುಂಬೈ: ಮಂಗಳವಾರ ಕಾನ್ಪುರದ ಐಐಟಿಯಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಭಾರತದ ಪ್ರಮುಖ ತಾಂತ್ರಿಕ ಸಂಸ್ಥೆಗಳ ಕ್ಯಾಂಪಸ್ಗಳಲ್ಲಿನ ಮಾನಸಿಕ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಪ್ರತಿ ವರ್ಷ ಸರಾಸರಿ ಒಂದು ಡಜನ್ಗೂ ಹೆಚ್ಚು ಯುವ ಜೀವಗಳು ಆತ್ಮಹತ್ಯೆಗೆ ಬಲಿಯಾಗುತ್ತಿವೆ.
Read Moreತಂದೆ ಅನುಪಮ್ ಖೇರ್ ಕೆನ್ನೆಗೆ ಹೊಡೆದ ಪುತ್ರ ನಟ ಸಿಕಂದರ್ ಖೇರ್! ವಿಡಿಯೋ
ನಟ ಸಿಕಂದರ್ ಖೇರ್ ತಮ್ಮ ತಂದೆ ಅನುಪಮ್ ಖೇರ್ ಅವರ ಕೆನ್ನೆಗೆ ಹೊಡೆದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ . ಬುಧವಾರ ಇನ್ಸ್ಟಾಗ್ರಾಮ್ನಲ್ಲಿ ಸಿಕಂದರ್ ಒಂದು ಕ್ಲಿಪ್ ಪೋಸ್ಟ್ ಮಾಡಿದ್ದು, ಅದರಲ್ಲಿ ಅನುಪಮ್ ಅವರ ಹಲ್ಲು ತೆಗೆಯಲಾಗಿದೆ ಎಂದು ಹೇಳಿದ್ದಾರೆ.
Read Moreಉಡುಪಿ: ಪರ್ಯಾಯ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಹಾರಿಸಿದ ಡಿಸಿ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಒತ್ತಾಯ
ಉಡುಪಿ: ಪರ್ಯಾಯ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಪ್ರದರ್ಶಿಸಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ
Read MorePuttur : ಕಳ್ಳತನ್ನ ತಪ್ಪಿಸಲು ಚಪ್ಪಲ್ ಗೆ ಬೀಗದ ಭದ್ರತೆ!
ಪುತ್ತೂರಿನ ಸಭಾಭವನವೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಸಭಾಂಗಣದ ಒಳಗೆ ಹೋದವರೆಲ್ಲರೂ ಚಪ್ಪಲಿ ಹೊರಗಿಟ್ಟು ತೆರಳಿದ್ದರು. ಎಲ್ಲರೂ ಸಭಾ ಭವನದ ಪ್ರವೇಶ ದ್ವಾರದ ಬಳಿ ಚಪ್ಪಲಿ ಇಟ್ಟು ತೆರಳಿದ್ದರು. ಆದರೆ ಇದೇ ಸಭಾಂಗಣದ ಸ್ವಲ್ಪ ದೂರದಲ್ಲಿ ಬೀಗ ಹಾಕಿದ ಚಪ್ಪಲಿಯನ್ನು ಕಂಡು ಒಮ್ಮೆಲೆ ಆಶ್ಚರ್ಯವಾಯಿತು. ಹಳೆಯ ಎರಡು ಚಪ್ಪಲಿಗಳ ಬಾರವನ್ನು ಜೋಡಿಸಿ ಹಳೆಯ ಬೀಗವನ್ನು ಜಡಿಯಲಾಗಿತ್ತು. ಇದು ಚಪ್ಪಲಿ ಕದಿಯದಿರಲಿ ಎಂಬ ಉದ್ದೇಶದಿಂದ ಆ ವ್ಯಕ್ತಿ ಬೀಗ ಹಾಕಿದ್ದಾಗಿದೆ. ಹಲವು ಬಾರಿ ಇವರ ಚಪ್ಪಲಿ ಕಳುವಾದ ಬಳಿಕ ಬೀಗ ಹಾಕುವ ತೀರ್ಮಾನಕ್ಕೆ ಬಂದಿರುವುದಾಗಿದೆ.
Read MoreBreaking: IPS ಅಧಿಕಾರಿಯ ರಾಸಲೀಲೆ ವಿಡಿಯೋ ವೈರಲ್
ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ವೈರಲ್ ಆಗಿದೆ.
Read More
