ಮಲ್ಲಿಗೆಯ ರಾಶಿಯಲ್ಲಿ ಪೆರುವಾಜೆ ಜಲದುರ್ಗೆ ದೇವಿಯ ನೋಡಿರೇ.. ಫೋಟೋಗಳು ಇಲ್ಲಿವೆ Wednesday, January 28th, 2026 G1 News Admin 0 Comments ಜಾತ್ರಾಮಹೋತ್ಸವದಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ರಾತ್ರಿ ದೇವರ ಬಲಿ ಹೊರಡು ಉತ್ಸವ ನಡೆಯಿತು. ವ್ಯಾಘ್ರ ಚಾಮುಂಡಿ (ಪಿಲಿಭೂತ) ಮತ್ತು ಜಲದುರ್ಗೆ ದೇವಿಯು ಬ್ರಹ್ಮರಥದ ಬಳಿ ಮುಖಾಮುಖಿಯಾದ ಅಪೂರ್ವ ದೃಶ್ಯವನ್ನು ನೋಡಿ ಕೈಮುಗಿದರು. ದೈವದ ಅಭಯ ನುಡಿಯೊಂದಿಗೆ ಜಲದುರ್ಗೆ ದೇವಿಯು ಬ್ರಹ್ಮರಥವೇರಿ ಆರೂಢರಾದಳು. ಬಳಿಕ ಪೂಜೆ ನೆರವೇರಿತು. ಇದೇ ವೇಳೆ ಸುಡುಮದ್ದು ಪ್ರದರ್ಶನವೂ ನಡೆಯಿತು. ವ್ಯಾಘ್ರ ಚಾಮುಂಡಿಯ ಹಿಂದಿನಿಂದ ಬ್ರಹ್ಮರಥವೂ ಸಾಗಿತು. 350 ಮೀ. ದೂರದ ವರೆಗೆ ರಥ ಎಳೆಯಲಾಯಿತು. ಈ ವೇಳೆ ನೆರೆದಿದ್ದ 15 ಸಾವಿರಕ್ಕೂ ಅಧಿಕ ಮಂದಿ ರಥೋತ್ಸವವನ್ನು ಕಣ್ತುಂಬಿಕೊಂಡರು. « ‹ of 2 › »