ದೇಶ
ಮದುವೆಯಾದ ಒಂದೇ ತಿಂಗಳಿಗೆ ನವವಧು ಆತ್ಮಹತ್ಯೆ!; 10 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ನರ್ಸ್ ಅಶ್ವತಿ ನಿಧನ!
ಕಾಸರಗೋಡು: ಪ್ರೀತಿಸಿ ಮದುವೆಯಾಗಿದ್ದ ನವವಧುವೊಬ್ಬರು ತಮ್ಮ ವಾಸಸ್ಥಳದಲ್ಲಿ ವಿಷ ಸೇವಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಕುತ್ತಿಕೋಲ್ ಬೇತ್ತೂರುಪಾರೆ ವಟಂತಟ್ಟ ನಿವಾಸಿಯಾದ 25 ವರ್ಷದ ಅಶ್ವತಿ ಮೃತಪಟ್ಟ ದುರ್ದೈವಿ. ಇವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಅಶ್ವತಿ ಅವರು ಪರಕಲಾಯಿ ಚೀಟಕ್ಕಾವು ನಿವಾಸಿಯಾದ ರೂಪೇಶ್ ಎಂಬುವವರನ್ನು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೂ ಹಿರಿಯರ ಸಮ್ಮತಿ ಸಿಕ್ಕಿ, ಕೇವಲ ಒಂದು ತಿಂಗಳ ಹಿಂದೆಯಷ್ಟೇ ಇವರ ವಿವಾಹ ಮಹೋತ್ಸವ ಅತ್ಯಂತ
Read Moreಕಾರಾಗೃಹ ಇಲಾಖೆಯ ಕೋಟ್ಯಂತರ ರೂ. ಬೆಲೆಬಾಳುವ ಜಾಗ ಕಬ್ಜ!; ವಕೀಲ ಅನಿಲ್, ಖಲಿಂ ವಿರುದ್ಧ ಅತಿಕ್ರಮಣದ ಗಂಭೀರ ಆರೋಪ!
ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಸರ್ಕಾರಿ ಆಸ್ತಿಗಳಿಗೂ ಈಗ ರಕ್ಷಣೆಯಿಲ್ಲದಂತಾಗಿದೆ. ಸಾರ್ವಜನಿಕರ ಆಸ್ತಿಯನ್ನು ಕಾಯಬೇಕಾದ ವ್ಯವಸ್ಥೆಯ ಕಣ್ಣೆದುರೇ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ‘ಮೈಸೂರು ಡಿಸ್ಚಾರ್ಜ್ಡ್ ಪ್ರಿಸನರ್ಸ್ ಏಡ್ ಸೊಸೈಟಿ’ಗೆ (Mysore Discharged Prisoners’ Aid Society) ಸೇರಿದ ಆಸ್ತಿಯ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಈ ಅಮೂಲ್ಯವಾದ ಆಸ್ತಿಯು ನೇರವಾಗಿ
Read Moreಹಳೇ ಲವ್ವರ್ ಜೊತೆ ಕಾರಲ್ಲಿ ಸುತ್ತಾಡಿದ ಯುವತಿ; ರೊಚ್ಚಿಗೆದ್ದು ಪಟಾಲಂನೊಂದಿಗೆ ಬಂದು ಮುಗಿಸಲು ನೋಡಿದ ಹಾಲಿ ಪ್ರೇಮಿ!
ಬೆಂಗಳೂರು: ಸಿಲಿಕಾನ್ ಸಿಟಿಯ ಶಾಂತಿನಗರದಲ್ಲಿ ಇತ್ತೀಚೆಗೆ ಕಾರು ಚಾಲಕನ ಮೇಲೆ ನಡೆದಿದ್ದ ಭೀಕರ ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಈಗ ಚಿತ್ರಕಥೆಯನ್ನೇ ಮೀರಿಸುವಂತಹ ರೋಚಕ ಪ್ರೇಮ ಕಥೆಯ ಟ್ವಿಸ್ಟ್ ಸಿಕ್ಕಿದೆ. ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದನ್ನು ಸಹಿಸದ ಆಕೆಯ ಹಾಲಿ ಪ್ರೇಮಿ, ತನ್ನ ಗ್ಯಾಂಗ್ನೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ವಿಲ್ಸನ್ ಗಾರ್ಡನ್ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಕಳೆದ ಮೇ 22ರಂದು ಮುಂಜಾನೆ ಶಾಂತಿನಗರದ ಮುಖ್ಯರಸ್ತೆಯೊಂದರಲ್ಲಿ ಈ ಗ್ಯಾಂಗ್ನಿಂದ ಭೀಕರ ಗೂಂಡಾಗಿರಿ ನಡೆದಿತ್ತು. ಸಾರ್ವಜನಿಕ ರಸ್ತೆಯಲ್ಲೇ
Read Moreಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಜೈಪುರದಲ್ಲಿ ತುರ್ತು ಲ್ಯಾಂಡಿಂಗ್!
ದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ಹೊರಟಿದ್ದ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ಸಚಿವರನ್ನೊಳಗೊಂಡ ನಿಯೋಗಕ್ಕೆ ಹವಾಮಾನ ವೈಪರೀತ್ಯದ ಶಾಕ್ ಎದುರಾಗಿದೆ. ದೆಹಲಿಯಲ್ಲಿ ದಿಢೀರ್ ಆಗಿ ಭಾರಿ ಗಾಳಿ ಮಳೆ ಮತ್ತು ಚಂಡಮಾರುತದ ವಾತಾವರಣ ಉಂಟಾದ ಕಾರಣ, ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ವಿಶೇಷ ಚಾರ್ಟರ್ಡ್ ವಿಮಾನವನ್ನು (Chartered Flight) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿಗೆ ರಾಜಸ್ಥಾನದ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ
Read Moreಬೆಂಗಳೂರಿನಲ್ಲಿ ಹಳೆ ಗೆಳತಿ ಮನೆಗೆ ಬಂದಿದ್ದ ಯುವಕನ ಭೀಕರ ಕೊಲೆ!: ಮದುವೆಯಾದ್ರೂ ಮುಂದುವರಿದಿದ್ದ ಸ್ನೇಹಕ್ಕೆ ಪತಿ ಅಸಮಾಧಾನ; ದಾರುಣವಾಗಿ ಜೀವ ಕಳೆದುಕೊಂಡ ಗುಜರಿ ವ್ಯಾಪಾರಿ!
ಬೆಂಗಳೂರು : ಹಳೆಯ ಶಾಲಾ ದಿನಗಳ ಸ್ನೇಹ ಮದುವೆಯ ನಂತರವೂ ಮುಂದುವರಿದಿದ್ದಕ್ಕೆ ಆಕ್ರೋಶಗೊಂಡ ಪತಿ ಮತ್ತು ಆತನ ಸಂಬಂಧಿಕರು ಸೇರಿ ಯುವಕನೊಬ್ಬನನ್ನು ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರದ ಬೀಡಿ ಕಾಲೋನಿಯ ನಿವಾಸಿ, 27 ವರ್ಷದ ಮೊಹಮ್ಮದ್ ಕಾಸಿಫ್ (Mohammed Kasif) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮೃತನ ಗೆಳತಿಯ ಪತಿ ಅಕ್ಬರ್ ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು
Read Moreಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸ ಸೇರಿ 10 ಕಡೆಗಳಲ್ಲಿ ಏಕಕಾಲದಲ್ಲಿ ಇಡಿ ದಾಳಿ; ಹೈಕೋರ್ಟ್ ಆದೇಶ ಬೆನ್ನಲ್ಲೇ ಕಂಗೆಟ್ಟ ಎಡರಂಗ!
ತಿರುವನಂತಪುರ: ದಕ್ಷಿಣ ಭಾರತದ ನೆರೆರಾಜ್ಯ ಕೇರಳದಲ್ಲಿ ಇಂದು (ಮೇ 27) ಮುಂಜಾನೆಯಿಂದಲೇ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭಾರಿ ಬಿರುಗಾಳಿ ಎಬ್ಬಿಸಿದ್ದಾರೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಅವರ ತಿರುವನಂತಪುರದ ಬಾಡಿಗೆ ನಿವಾಸ ಮತ್ತು ಕಣ್ಣೂರಿನ ಸ್ವಗೃಹ ಸೇರಿದಂತೆ ಒಟ್ಟು 10 ಪ್ರಮುಖ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
Read Moreಮದುವೆಯ ಇತಿಹಾಸದಲ್ಲೇ ಇಂತಹ ರಿಟರ್ನ್ ಗಿಫ್ಟ್ ಯಾರೂ ಕೊಟ್ಟಿಲ್ಲ!: ಇಡೀ ಹಳ್ಳಿಯ ಜನರಿಗೆ 34.6 ಕೋಟಿ ರೂ. ಮೌಲ್ಯದ ವಿಮೆ ಉಡುಗೊರೆ ನೀಡಿದ ವರ!
ನಾಂದೇಡ್: ಸಾಮಾನ್ಯವಾಗಿ ಶ್ರೀಮಂತರ ಮದುವೆ ಎಂದರೆ ಅದ್ಧೂರಿ ಹೂವಿನ ಹಾರಗಳು, ಭರ್ಜರಿ ಬ್ಯಾಂಡ್ ಸೆಟ್, ಡಿಜೆ ಮ್ಯೂಸಿಕ್ ಹಾಗೂ ಪಂಚಭಕ್ಷ್ಯ ಪರಮಾನ್ನಗಳ ಊಟ ನೆನಪಿಗೆ ಬರುತ್ತದೆ. ಮದುವೆಗೆ ಬಂದ ನೆಂಟರಿಷ್ಟರಿಗೆ ತೆಂಗಿನಕಾಯಿ, ತಾಂಬೂಲ ಇಲ್ಲವೇ ಬೆಳ್ಳಿ ನಾಣ್ಯಗಳನ್ನು ರಿಟರ್ನ್ ಗಿಫ್ಟ್ ಆಗಿ ನೀಡುವುದು ಸಂಪ್ರದಾಯ. ಆದರೆ ಮಹಾರಾಷ್ಟ್ರದ ಬಹಾದರಪುರ ಗ್ರಾಮದಲ್ಲಿ ನಡೆದ ವಿವಾಹವೊಂದರಲ್ಲಿ, ವರನ ಕಡೆಯವರು ನೀಡಿದ ರಿಟರ್ನ್ ಗಿಫ್ಟ್ ಕಂಡು ಇಡೀ ದೇಶವೇ ಮೂಗಿನ ಮೇಲೆ ಬೆರಳಿಟ್ಟಿದೆ! ಹೌದು, ವರ ಸಿದ್ದೇಶ್ವರ್ ಪೇಠ್ಕರ್ ಮತ್ತು ಅವರ
Read Moreಕೇರಳ ಹೈಕೋರ್ಟ್ ಐತಿಹಾಸಿಕ ತೀರ್ಪು: ಆದಿವಾಸಿ ಯುವಕ ‘ಮಧು’ ಹತ್ಯೆ ಪ್ರಕರಣದ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ!; ಮೊದಲ ಆರೋಪಿ ಖುಲಾಸೆ
ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಧನಲಾಭ? ಯಾರಿಗೆ ಉದ್ಯೋಗದಲ್ಲಿ ಪ್ರಗತಿ? ಮೇಷದಿಂದ ಮೀನ ರಾಶಿಯವರೆಗಿನ ಸಂಪೂರ್ಣ ಜಾತಕ ಫಲ ಇಲ್ಲಿದೆ.
Read Moreಇಂದು ಸಂಜೆ ದೆಹಲಿಯಲ್ಲಿ ‘ಪದ್ಮ ಪ್ರಶಸ್ತಿ 2026’ ಪ್ರದಾನ ಸಮಾರಂಭ
ದೆಹಲಿ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ ಪ್ರಶಸ್ತಿ 2026’ (Padma Awards 2026) ಪ್ರದಾನ ಸಮಾರಂಭವು ರಾಜಧಾನಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು (ಮೇ 25) ಸಂಜೆ 5 ಗಂಟೆಗೆ ಅತ್ಯಂತ ಅದ್ಧೂರಿಯಾಗಿ ಜರುಗಲಿದೆ. ವಿವಿಧ ಕ್ಷೇತ್ರಗಳಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಧೀಮಂತ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಈ ವರ್ಷ ಕೇಂದ್ರ ಸರ್ಕಾರವು ವಿವಿಧ ಕ್ಷೇತ್ರಗಳ ಒಟ್ಟು 131 ಧೀಮಂತ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು
Read More11 ದಿನಗಳಲ್ಲಿ 4ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಭಾರಿ ಏರಿಕೆ
ದೇಶಾದ್ಯಂತ ಪೆಟ್ರೋಲ್ 2.61 ರೂ. ಹಾಗೂ ಡೀಸೆಲ್ 2.71 ರೂ. ಏರಿಕೆಯಾಗಿದೆ. 11 ದಿನಗಳಲ್ಲಿ 4ನೇ ಬಾರಿ ದರ ಹೆಚ್ಚಳವಾಗಿದ್ದು ವಾಹನ ಸವಾರರು ಕಂಗಾಲಾಗಿದ್ದಾರೆ.
Read More
